ಶಿಕ್ಷಕ ಗೋಪಾಲ್ ವೈಯುಕ್ತಿಕ ವಿಚಾರ ಮಾತನಾಡಿ, ಜಾತಿ ನಿಂದನೆ, ಮಾನಸಿಕ ಕಿರುಕುಳ ನೀಡಿ, ಅವಾಚ್ಯ ಮತ್ತು ಅವಹೇಳನಕಾರಿ ಪದ ಬಳಿಸಿ ನಿಂದಿಸಿದ್ದಾರೆ ಎಂದು ಶಿಕ್ಷಕಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಅಧಿಕಾರಿಗಳು ಸಂಧಾನ ಮಾಡಿದ್ದರು. ಆನಂತರವೂ ಗೋಪಾಲ್ ಅದನ್ನೇ ಮುಂದುವರೆಸಿದ್ದರಿಂದ ಶಿಕ್ಷಕಿ ಉಪನಿರ್ದೇಶಕರಿಗೆ ದೂರು ನೀಡಿದ್ದರು.