<p><strong>ಗುಬ್ಬಿ</strong>: ತಾಲ್ಲೂಕಿನ ಬಾಗೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿದ್ದ ಮರ, ಗಿಡಗಳನ್ನು ನಾಶ ಮಾಡಿ ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇದಕ್ಕೆ ತಾಲ್ಲೂಕು ಆಡಳಿತ ತಡೆ ನೀಡಬೇಕು ಎಂದು ಬಾಗೂರು ಗ್ರಾಮಸ್ಥರು ಭಾನುವಾರ ಗುಬ್ಬಿ ಪೊಲೀಸರು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.</p>.<p>ಗ್ರಾಮದ ಸರ್ವೆ ನಂಬರ್ 4, 9 ಮತ್ತು 11ರಲ್ಲಿ ಸುಮಾರು 28 ಎಕರೆ ಸರ್ಕಾರಿ ಬೀಳು ಪ್ರದೇಶ ಇದೆ. ಕೆಲವರಿಗೆ ಬಗರ್ಹುಕುಂ ಯೋಜನೆಯಡಿ ಜಮೀನು ಹಕ್ಕುಪತ್ರ ಪಡೆದಿದ್ದಾರೆ. ಇಲ್ಲಿ ಉಳಿದಿದ್ದ 4 ಎಕರೆಯಲ್ಲಿನ ಮರ, ಗಿಡಗಳನ್ನು ಈಗ ನಾಶ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿತ್ತು. ಆದರೂ ಕ್ರಮವಹಿಸಲು ವಿಳಂಬವಾಗಿದೆ ಎಂದು ಸ್ಥಳೀಯರು ದೂರಿದರು.</p>.<p>ಬಗರ್ಹುಕುಂ ಯೋಜನೆಯಡಿ ಜಮೀನು ಮಂಜೂರಿಗೆ ನಿಯಮಗಳು ಇವೆ. ಸರ್ಕಾರಿ ಜಾಗವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು ಎಂದು ಸ್ಥಳೀಯ ದಯಾನಂದಸ್ವಾಮಿ ಮನವಿ ಮಾಡಿದರು.</p>.<p>ನಿಟ್ಟೂರು ಹೋಬಳಿಯಲ್ಲಿ ಅತಿಕ್ರಮಣ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯ ಪ್ರದೇಶಗಳು ಒತ್ತುವರಿ ಆಗುತ್ತಿವೆ. ಗೋಮಾಳ, ಗೋಕಟ್ಟೆ ಜಾಗಗಳು ಮಾಯವಾಗಿವೆ. ಈಗ ಸರ್ಕಾರಿ ಖರಾಬು, ಬೀಳು ಸ್ಥಳಗಳತ್ತ ಕಣ್ಣು ಬಿದ್ದಿದೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು ಎಂದು ಗುರುಸಿದ್ದಯ್ಯ ಒತ್ತಾಯಿಸಿದರು.</p>.<p>ಮಂಜುನಾಥ್, ರಘು, ವಿಜಯ್ಕುಮಾರ್, ಸಿದ್ದರಾಮಯ್ಯ, ರಾಜೇಶ್, ಯಡಿಯೂರಪ್ಪ, ಸಿದ್ದರಾಮಪ್ರಭು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ</strong>: ತಾಲ್ಲೂಕಿನ ಬಾಗೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿದ್ದ ಮರ, ಗಿಡಗಳನ್ನು ನಾಶ ಮಾಡಿ ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇದಕ್ಕೆ ತಾಲ್ಲೂಕು ಆಡಳಿತ ತಡೆ ನೀಡಬೇಕು ಎಂದು ಬಾಗೂರು ಗ್ರಾಮಸ್ಥರು ಭಾನುವಾರ ಗುಬ್ಬಿ ಪೊಲೀಸರು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.</p>.<p>ಗ್ರಾಮದ ಸರ್ವೆ ನಂಬರ್ 4, 9 ಮತ್ತು 11ರಲ್ಲಿ ಸುಮಾರು 28 ಎಕರೆ ಸರ್ಕಾರಿ ಬೀಳು ಪ್ರದೇಶ ಇದೆ. ಕೆಲವರಿಗೆ ಬಗರ್ಹುಕುಂ ಯೋಜನೆಯಡಿ ಜಮೀನು ಹಕ್ಕುಪತ್ರ ಪಡೆದಿದ್ದಾರೆ. ಇಲ್ಲಿ ಉಳಿದಿದ್ದ 4 ಎಕರೆಯಲ್ಲಿನ ಮರ, ಗಿಡಗಳನ್ನು ಈಗ ನಾಶ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿತ್ತು. ಆದರೂ ಕ್ರಮವಹಿಸಲು ವಿಳಂಬವಾಗಿದೆ ಎಂದು ಸ್ಥಳೀಯರು ದೂರಿದರು.</p>.<p>ಬಗರ್ಹುಕುಂ ಯೋಜನೆಯಡಿ ಜಮೀನು ಮಂಜೂರಿಗೆ ನಿಯಮಗಳು ಇವೆ. ಸರ್ಕಾರಿ ಜಾಗವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು ಎಂದು ಸ್ಥಳೀಯ ದಯಾನಂದಸ್ವಾಮಿ ಮನವಿ ಮಾಡಿದರು.</p>.<p>ನಿಟ್ಟೂರು ಹೋಬಳಿಯಲ್ಲಿ ಅತಿಕ್ರಮಣ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯ ಪ್ರದೇಶಗಳು ಒತ್ತುವರಿ ಆಗುತ್ತಿವೆ. ಗೋಮಾಳ, ಗೋಕಟ್ಟೆ ಜಾಗಗಳು ಮಾಯವಾಗಿವೆ. ಈಗ ಸರ್ಕಾರಿ ಖರಾಬು, ಬೀಳು ಸ್ಥಳಗಳತ್ತ ಕಣ್ಣು ಬಿದ್ದಿದೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು ಎಂದು ಗುರುಸಿದ್ದಯ್ಯ ಒತ್ತಾಯಿಸಿದರು.</p>.<p>ಮಂಜುನಾಥ್, ರಘು, ವಿಜಯ್ಕುಮಾರ್, ಸಿದ್ದರಾಮಯ್ಯ, ರಾಜೇಶ್, ಯಡಿಯೂರಪ್ಪ, ಸಿದ್ದರಾಮಪ್ರಭು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>