ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತಿಪಟೂರು ಎಪಿಎಂಸಿ: ₹19 ಸಾವಿರ ದಾಟಿದ ಕ್ವಿಂಟಲ್ ಕೊಬ್ಬರಿ

Published : 25 ಮಾರ್ಚ್ 2025, 6:25 IST
Last Updated : 25 ಮಾರ್ಚ್ 2025, 6:25 IST
ಫಾಲೋ ಮಾಡಿ
Comments
ಬೆಲೆ ಏರಿಕೆಗೆ ಕಾರಣ ಏನು?
ಬೇಡಿಕೆಯಷ್ಟು ಆವಕ ಇಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬರಿ ಹಾಗೂ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ಅದರೊಂದಿಗೆ ಕೇರಳ ತಮಿಳುನಾಡಿನಲ್ಲೂ ಬೇಡಿಕೆ ಹೆಚ್ಚಾಗಿರುವುದು ಒಮ್ಮೆಲೆ ದರ ಏರಿಕೆಯಾಗುವಂತೆ ಮಾಡಿದೆ ಎನ್ನುವುದು ವರ್ತಕರ ವಿಶ್ಲೇಷಣೆ.
ತೆಂಗಿನ ಜಾಗ ಆಕ್ರಮಿಸುತ್ತಿರುವ ಅಡಿಕೆ
ಸತತ ಬರ ನೀರಿನ ಕೊರತೆಯಿಂದ ತೆಂಗಿನ ಮರಗಳು ಒಣಗುತ್ತಿದ್ದು ರೋಗ ಬಾಧೆಯಿಂದ ಇಳುವರಿ ಕುಸಿತವಾಗಿದೆ. ಎಳನೀರಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಬೆಳೆಗಾರರು ಅತ್ತ ಮುಖ ಮಾಡಿದ್ದಾರೆ. ತೆಂಗು ಪ್ರದೇಶ ವಿಸ್ತರಣೆ ಆಗದಿರುವುದು ತೆಂಗಿನ ಜಾಗದಲ್ಲಿ ಅಡಿಕೆ ಬೆಳೆ ಕಾಲಿಟ್ಟಿರುವುದು ಕೊಬ್ಬರಿ ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತೆಂಗು ಬೆಳೆಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT