ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ತಿಪಟೂರು | ಟೂಡ ಅಧ್ಯಕ್ಷಗಾದಿ ನನೆಗುದಿಗೆ: ಶಾಸಕರ ನಿರ್ಲಕ್ಷ್ಯ ಆರೋಪ

ಅಧ್ಯಕ್ಷರಿಲ್ಲದೆ ದಿಕ್ಕು ತಪ್ಪಿದ ಯೋಜನಾ ಪ್ರಾಧಿಕಾರ: ನಗರದ ಅಭಿವೃದ್ಧಿಗೆ ಹಿನ್ನಡೆ
ಪ್ರಶಾಂತ್ ಕೆ.ಆರ್.
Published : 20 ಅಕ್ಟೋಬರ್ 2025, 4:41 IST
Last Updated : 20 ಅಕ್ಟೋಬರ್ 2025, 4:41 IST
ಫಾಲೋ ಮಾಡಿ
Comments
ಜಿಲ್ಲಾ ಪಂಚಾಯಿತಿ, ಎಪಿಎಂಸಿ, ನಗರಸಭೆ, ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗುತ್ತಿದ್ದು, ಸ್ಥಳೀಯ ಆಡಳಿತದ ಕನಸು ಗಗನ ಕುಸುಮವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಟೂಡಾ ಸೇರಿದಂತೆ ಯಾವುದಕ್ಕೂ ನಾಮನಿರ್ದೇಶನ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲಿಲ್ಲ. ಕಾಂಗ್ರೆಸ್‌ನವರೂ ಮಾಡಲ್ಲ. ಶಾಸಕರದ್ದೇ ಪರಮಾಧಿಕಾರ ಎಂಬಂತಾಗಿದೆ. ಗ್ಯಾರಂಟಿ ಗುಲಾಮಗಿರಿಯಲ್ಲಿ ಅಭಿವೃದ್ಧಿ ಮರೀಚಿಕೆಯಾದರೂ ಯಾರು ಧ್ವನಿ ಎತ್ತುತ್ತಿಲ್ಲ.
–ಸಿಂಗ್ರಿ ದತ್ತಪ್ರಸಾದ್, ನಗರಸಭೆ ಮಾಜಿ ಸದಸ್ಯ
ಜಿಲ್ಲಾ ಕೇಂದ್ರವಾಗಬೇಕಿರುವ ನಗರಕ್ಕೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನು ನೇಮಕ ಮಾಡದಿರುವುದು ಅಭಿವೃದ್ಧಿ ದೃಷ್ಟಿಯಲ್ಲಿ ಮತ್ತು ಮಧ್ಯಮ ವರ್ಗದವರ ಮನೆ ನಿರ್ಮಾಣದ ಕನಸಿಗೆ ಹಿನ್ನಡೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ಜಿಲ್ಲೆ ಮಾಡುತ್ತೇವೆ ಎಂದು ಹೇಳಿ ಮಾತು ತಪ್ಪಿದ್ದು, ನೇಮಕಾತಿಯಾದರೆ ಎಲ್ಲಿ ನಮ್ಮ ಅಧಿಕಾರ ಕೈ ತಪ್ಪುತ್ತದೆ ಎನ್ನುವುದು ಮಾಜಿ ಹಾಗೂ ಹಾಲಿ ಶಾಸಕರ ಮನಸ್ಥಿತಿ.
–ಮುರಳೀಧರ್, ಮಲ್ಲೇನಹಳ್ಳಿ
ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರು ಎಷ್ಟು ಮುಖ್ಯವೊ, ನಗರದ ಅಭಿವೃದ್ಧಿಗೆ ಪ್ರಾಧಿಕಾರ ಸಹ ಮುಖ್ಯ. ನೇಮಕಾತಿ ವಿಚಾರದಲ್ಲಿ ಆಸಕ್ತಿ ವಹಿಸಿ ನೇಮಕಾತಿ ಮಾಡುವುದು ಸೂಕ್ತ. ಅಭಿವೃದ್ಧಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಬಹುಮುಖ್ಯ ಪಾತ್ರ ವಹಿಸುತ್ತದೆ.
–ಪ್ರಕಾಶ್ ಹುಣಸೆಘಟ್ಟ, ಜೆಡಿಎಸ್ ಮುಖಂಡ
ನಗರ ವಾಣಿಜ್ಯ ಕೇಂದ್ರವಾಗಿದ್ದು, ಸುತ್ತಲಿನ ನಾಲ್ಕು ತಾಲ್ಲೂಕುಗಳಿಂದ ಸಂಪರ್ವಿದ್ದು, ವೇಗವಾಗಿ ಬೆಳೆಯುತ್ತಿದೆ. ನಗರ ಪ್ರಾಧಿಕಾರವು ವೇಗವಾಗಿ ಕಾರ್ಯನಿರ್ವಹಿಸಬೇಕು. ಆದರೆ ಈವರೆಗೆ ಸ್ವಂತ ಕಚೇರಿ, ಶಾಶ್ವತ ಅಧಿಕಾರಿಗಳು, ಅಧ್ಯಕ್ಷರ ನೇಮಕಾತಿಯಾಗಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಭರಾಟೆಯಲ್ಲಿ ಸಾಗುತ್ತಿದೆ. ನಗರದ ಅಭಿವೃದ್ಧಿ ಕುಂಠಿತವಾಗಿದೆ.
–ವಿಜಯ್ ವಿಕ್ರಮ್, ಕಂಚಾಘಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT