ಮಾವಿನ ಸೀಜನ್ ಮುಗಿದಿದ್ದು, ನೇರಳೆ ಹಣ್ಣಿನ ಆವಕವೂ ಕಡಿಮೆಯಾಗುತ್ತಾ ಬರುತ್ತಿದೆ. ತಳ್ಳುಗಾಡಿಗಳು, ಬೀದಿಬದಿಯ ಹಣ್ಣಿನ ವ್ಯಾಪಾರವೂ ಕಡಿಮೆಯಾಗಿದೆ. ಹಾಗಾಗಿ ಈಗ ಹೆಚ್ಚಿನ ಜನರು ಹಾಪ್ಕಾಮ್ಸ್ಗೆ ಬರುತ್ತಾರೆ. ಕೊರೊನಾ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸ್ಯಾನಿಟೈಜರ್ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಹಾಪ್ಕಾಮ್ಸ್ ಸೇಲ್ಸ್ಮ್ಯಾನ್ ಟಿ.ಆರ್.ನಾಗರಾಜು.