ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಎದುರಿಗಿದ್ದ ಅರಳಿಮರ, ಬಸ್ನಿಲ್ದಾಣದೊಳಗಿದ್ದ ಅರಳಿಮರ ಹಾಗೂ ಹುಳಿಯಾರು ರಸ್ತೆಯ ದಾರಿ ಸಮೀಪವಿದ್ದ ಅರಳಿಮರಗಳು ಶತಮಾನಗಳ ಕಾಲದಿಂದ ಲಕ್ಷಾಂತರ ಪ್ರಯಾಣಿಕರಿಗೆ ನೆರಳನ್ನು ನೀಡಿದ್ದವು. ನಾಗರಕಲ್ಲುಗಳಿಗೆ ನೆರಳಾಗಿದ್ದವು, ಅನಾಥರಿಗೆ ಆಶ್ರಯವಾಗಿದ್ದ ಅರಳಿಮರಗಳೇ ಇಂದು ಅನಾಥವಾಗಿವೆ.ಕೆಲವರು ಈ ಮರಗಳ ಕೆಳಗೆ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನವನ್ನೂ ನಡೆಸುತ್ತಿದ್ದರು. ಅದರಲ್ಲೂ ಸರ್ಕಾರಿ ಕಚೇರಿ, ಬ್ಯಾಂಕ್ಗಳಿಗೆ ಬಂದ ಹಿರಿಯರು, ಮಕ್ಕಳು, ಮಹಿಳೆಯರು ಇದೇ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು.