ಕೊಡಲಾಗರ ಗ್ರಾಮದ ನಿವಾಸಿ ಚಿದಾನಂದಮೂರ್ತಿ-ಸ್ಮಿತಾ ದಂಪತಿಯ ನೆರೆಮನೆಯಲ್ಲೇ ವಾಸಿಸುತ್ತಿದ್ದ ಆದಿತ್ಯ ಏಕಾಏಕಿ ಮನೆಗೆ ನುಗ್ಗಿ ಚಿದಾನಂದಮೂರ್ತಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದ, ಚಿದಾನಂದಮೂರ್ತಿ ಭುಜಕ್ಕೆ ತೀವ್ರಸ್ವರೂಪದ ಗಾಯವಾಗಿತ್ತು. ಜಗಳ ಬಿಡಿಸಲು ಬಂದಿದ್ದ ಮಂಜುನಾಥ, ಮನು, ಮಧುಸೂದನ ಮತ್ತು ಕೃಷ್ಣಮೂರ್ತಿ ಅವರಿಗೂ ಗುಂಡು ತಾಗಿತ್ತು.