<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕೊಡಲಾಗರ ಗ್ರಾಮದ ನಿವಾಸಿ ಆದಿತ್ಯ 2015ರಲ್ಲಿ ನೆರೆಮನೆಯ ನಿವಾಸಿ ಚಿದಾನಂದಮೂರ್ತಿ ಅವರ ಮೇಲೆ ಗುಂಡು ಹಾರಿಸಿದ್ದ ಪ್ರಕರಣದ ಸಂಬಂಧಿಸಿದಂತೆ ಅಪರಾಧಿ ಆದಿತ್ಯನಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ₹10ಸಾವಿರ ದಂಡ ವಿಧಿಸಿ ತಿಪಟೂರಿನ 5ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.</p>.<p>ಕೊಡಲಾಗರ ಗ್ರಾಮದ ನಿವಾಸಿ ಚಿದಾನಂದಮೂರ್ತಿ-ಸ್ಮಿತಾ ದಂಪತಿಯ ನೆರೆಮನೆಯಲ್ಲೇ ವಾಸಿಸುತ್ತಿದ್ದ ಆದಿತ್ಯ ಏಕಾಏಕಿ ಮನೆಗೆ ನುಗ್ಗಿ ಚಿದಾನಂದಮೂರ್ತಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದ, ಚಿದಾನಂದಮೂರ್ತಿ ಭುಜಕ್ಕೆ ತೀವ್ರಸ್ವರೂಪದ ಗಾಯವಾಗಿತ್ತು. ಜಗಳ ಬಿಡಿಸಲು ಬಂದಿದ್ದ ಮಂಜುನಾಥ, ಮನು, ಮಧುಸೂದನ ಮತ್ತು ಕೃಷ್ಣಮೂರ್ತಿ ಅವರಿಗೂ ಗುಂಡು ತಾಗಿತ್ತು.</p>.<p>ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸ್ ನಿರೀಕ್ಷಕ ವಿಜಯಕುಮಾರ್ ಜಿ.ಆರ್ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕೊಡಲಾಗರ ಗ್ರಾಮದ ನಿವಾಸಿ ಆದಿತ್ಯ 2015ರಲ್ಲಿ ನೆರೆಮನೆಯ ನಿವಾಸಿ ಚಿದಾನಂದಮೂರ್ತಿ ಅವರ ಮೇಲೆ ಗುಂಡು ಹಾರಿಸಿದ್ದ ಪ್ರಕರಣದ ಸಂಬಂಧಿಸಿದಂತೆ ಅಪರಾಧಿ ಆದಿತ್ಯನಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ₹10ಸಾವಿರ ದಂಡ ವಿಧಿಸಿ ತಿಪಟೂರಿನ 5ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.</p>.<p>ಕೊಡಲಾಗರ ಗ್ರಾಮದ ನಿವಾಸಿ ಚಿದಾನಂದಮೂರ್ತಿ-ಸ್ಮಿತಾ ದಂಪತಿಯ ನೆರೆಮನೆಯಲ್ಲೇ ವಾಸಿಸುತ್ತಿದ್ದ ಆದಿತ್ಯ ಏಕಾಏಕಿ ಮನೆಗೆ ನುಗ್ಗಿ ಚಿದಾನಂದಮೂರ್ತಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದ, ಚಿದಾನಂದಮೂರ್ತಿ ಭುಜಕ್ಕೆ ತೀವ್ರಸ್ವರೂಪದ ಗಾಯವಾಗಿತ್ತು. ಜಗಳ ಬಿಡಿಸಲು ಬಂದಿದ್ದ ಮಂಜುನಾಥ, ಮನು, ಮಧುಸೂದನ ಮತ್ತು ಕೃಷ್ಣಮೂರ್ತಿ ಅವರಿಗೂ ಗುಂಡು ತಾಗಿತ್ತು.</p>.<p>ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸ್ ನಿರೀಕ್ಷಕ ವಿಜಯಕುಮಾರ್ ಜಿ.ಆರ್ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>