‘ಜೈಲಿಗೆ ಭೇಟಿ ನೀಡುವ ಉನ್ನತ ಅಧಿಕಾರಿಗಳಿಗೆ ಅವರ ದರ್ಜೆಗೆ ತಕ್ಕಂತೆ ಲಕ್ಷಗಟ್ಟಲೆ ಲಂಚ ನೀಡುತ್ತಿದ್ದೇನೆ. ಇಲ್ಲಿಗೆ ಬರುವುದು ನಿಮ್ಮಗಳ (ಕೈದಿಗಳು) ಯೋಗಕ್ಷೇಮ ವಿಚಾರಿಸುವುದಕ್ಕಲ್ಲ. ಮಾಮೂಲಿ ಲಂಚದ ಹಣ ಪಡೆದುಕೊಳ್ಳಲು ಬರುತ್ತಾರೆ. ನೀವುಗಳು ಯಾರಿಗೇ ದೂರು ನೀಡಿದರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಬಾಲ ಬಿಚ್ಚಿದರೆ ಅಂತಹವರ ಮನೆ, ಮಠ ಮಾರಿಸುತ್ತೇನೆ. ಹೆಂಡತಿ, ಮಕ್ಕಳನ್ನು ಅಡಮಾನ ಇರಿಸುವಂತೆ, ಸಾಯುವವರೆಗೂ ಜೈಲಿನಲ್ಲೇ ಕೊಳೆಯುವಂತೆ ಮಾಡುತ್ತೇನೆ’ ಎಂದು ಅಧೀಕ್ಷಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.