ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಲೋಕಸಭೆ ಚುನಾವಣೆ: ಬಿಜೆಪಿಯಿಂದ ಟಿಕೆಟ್‌ ಕೇಳಿದ ಸೊಗಡು ಶಿವಣ್ಣ!

Published 10 ಮಾರ್ಚ್ 2024, 15:50 IST
Last Updated 10 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಬಿಜೆಪಿಯ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಶಿವಣ್ಣ ಬೆಂಬಲಿಗರು ಮತ್ತು ಅಭಿಮಾನಿಗಳು ಸಭೆ ಸೇರಿ ಶಿವಣ್ಣಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಸೊಗಡು ಶಿವಣ್ಣ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದಾರೆ. ಜಿಲ್ಲೆಯ ಶಕ್ತಿ ಕೇಂದ್ರವಾಗಿದ್ದಾರೆ. ಅವರ ಮೌನವನ್ನು ದೌರ್ಬಲ್ಯ ಎಂದು ಭಾವಿಸಬಾರದು. ಈ ಬಾರಿ ಚುನಾವಣೆಯ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂದು ಕುಣಿಗಲ್‌ನ ನಟರಾಜ್‌, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್‌, ಮಧುಗಿರಿಯ ಪಿ.ಎನ್.ನರಸಿಂಹಮೂರ್ತಿ, ಬೆಳಗುಂಬ ಪ್ರಭಾಕರ್ ಇತರರು ಒತ್ತಾಯಿಸಿದರು.

ಬಸವಕುಮಾರ್, ಸೊಗಡು ವೆಂಕಟೇಶ್‌, ಬಡ್ಡಿಹಳ್ಳಿ ಚಂದ್ರಣ್ಣ, ರಾಮರಾಜು, ಗೋಕುಲ್‌ ಮಂಜುನಾಥ್, ಗುಬ್ಬಿ ಪ್ರಮೋದ್, ಸುರೇಶ್, ಕಾಂಡಿಮೆಂಟ್‌ ಶಿವಣ್ಣ, ಸತ್ಯಮಂಗಲ ಕೆ.ಎಸ್.ಸದಾಶಿವಯ್ಯ, ಗರುಡಯ್ಯ, ಕೆ.ಪಿ.ಮಹೇಶ, ರಾಜಕುಮಾರ್ ಗುಪ್ತ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT