ಮಾನಸಿಕವಾಗಿ ನೊಂದ ಮಹಿಳೆಯರನ್ನು ಪರಿವರ್ತಿಸಿ, ಕುಟುಂಬಗಳನ್ನು ಒಗ್ಗೂಡಿಸಿಕೊಂಡು ಬರುತ್ತಿರುವ ಇಂತಹ ಕಲ್ಯಾಣ ಕೇಂದ್ರಗಳನ್ನು ಹಣಕಾಸಿನ ನೆಪ ಹೇಳಿಕೊಂಡು ಸ್ಥಗಿತಗೊಳಿಸಲು ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ. ಲಾಕ್ಡೌನ್ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಕುಟುಂಬಗಳು ಮಾನಸಿಕವಾಗಿ ನರಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಂತ್ವನ ಕೇಂದ್ರಗಳಂತಹ ಸಂಸ್ಥೆಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವಾಗ ದಿಢೀರ್ ಸ್ಥಗಿತಗೊಳಿಸುವ ನಿರ್ಧಾರ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.