<p><strong>ತುಮಕೂರು: </strong>ಏಪ್ರಿಲ್ನ ಬೇಸಿಗೆಯಲ್ಲೂ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಹಸಿರಿನಿಂದ ನಳನಳಿಸುತ್ತಿದೆ. ಈ ಹಸಿರಿನ ಪರಿಸರಕ್ಕೆ ಕೊರೊನಾ ಸಹ ಪರೋಕ್ಷ ಕಾರಣವಾಗಿದೆ!</p>.<p>ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗುತ್ತಿತ್ತು. ವಿಶ್ವವಿದ್ಯಾಲಯದ ಗಿಡಮರಗಳು ಕಳೆಗುಂದುತ್ತಿದ್ದವು. ಆದರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಈಗ ರಜೆ ಇರುವುದರಿಂದ ಸಾಕಷ್ಟು ನೀರಿನ ಉಳಿತಾಯವಾಗುತ್ತಿದೆ.</p>.<p>ವಿ.ವಿ ಆವರಣದಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಉಳಿಕೆ ಆಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕ್ಯಾಂಪಸ್ ಅನ್ನು ಹಸಿರುಮಯವಾಗಿಸಲಾಗಿದೆ. ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಅವರು ನಿತ್ಯ ಕ್ಯಾಂಪಸ್ನಲ್ಲಿ ಖುದ್ದು ಹಾಜರಿದ್ದು ಕೆಲಸಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.</p>.<p>‘ಉಳಿಕೆಯಾಗಿರುವ ನೀರಿನ ಸದುಪಯೋಗ ಮಾಡುತ್ತಿದ್ದೇವೆ. ಸುಡುಬಿಸಿಲಿನಲ್ಲೂ ಸಾವಿರಾರು ಅಪರೂಪದ ಮರಗಳನ್ನು ಹೊಂದಿರುವ ನಮ್ಮ ಕ್ಯಾಂಪಸ್ ಹಸಿರಿನಿಂದ ತುಳುಕುತ್ತಿದೆ. ನೋಡಲು ಹೆಮ್ಮೆ ಎನಿಸುತ್ತದೆ’ ಎಂದು ಪ್ರೊ.ಸಿದ್ದೇಗೌಡ ತಿಳಿಸಿದರು.</p>.<p>ಕ್ಯಾಂಪಸ್ನಲ್ಲಿ ಸಂಗ್ರಹವಾದ ತರಗೆಲೆ ಮತ್ತಿತರ ತ್ಯಾಜ್ಯಗಳನ್ನು ನಿತ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಏಪ್ರಿಲ್ನ ಬೇಸಿಗೆಯಲ್ಲೂ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಹಸಿರಿನಿಂದ ನಳನಳಿಸುತ್ತಿದೆ. ಈ ಹಸಿರಿನ ಪರಿಸರಕ್ಕೆ ಕೊರೊನಾ ಸಹ ಪರೋಕ್ಷ ಕಾರಣವಾಗಿದೆ!</p>.<p>ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗುತ್ತಿತ್ತು. ವಿಶ್ವವಿದ್ಯಾಲಯದ ಗಿಡಮರಗಳು ಕಳೆಗುಂದುತ್ತಿದ್ದವು. ಆದರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಈಗ ರಜೆ ಇರುವುದರಿಂದ ಸಾಕಷ್ಟು ನೀರಿನ ಉಳಿತಾಯವಾಗುತ್ತಿದೆ.</p>.<p>ವಿ.ವಿ ಆವರಣದಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಉಳಿಕೆ ಆಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕ್ಯಾಂಪಸ್ ಅನ್ನು ಹಸಿರುಮಯವಾಗಿಸಲಾಗಿದೆ. ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಅವರು ನಿತ್ಯ ಕ್ಯಾಂಪಸ್ನಲ್ಲಿ ಖುದ್ದು ಹಾಜರಿದ್ದು ಕೆಲಸಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.</p>.<p>‘ಉಳಿಕೆಯಾಗಿರುವ ನೀರಿನ ಸದುಪಯೋಗ ಮಾಡುತ್ತಿದ್ದೇವೆ. ಸುಡುಬಿಸಿಲಿನಲ್ಲೂ ಸಾವಿರಾರು ಅಪರೂಪದ ಮರಗಳನ್ನು ಹೊಂದಿರುವ ನಮ್ಮ ಕ್ಯಾಂಪಸ್ ಹಸಿರಿನಿಂದ ತುಳುಕುತ್ತಿದೆ. ನೋಡಲು ಹೆಮ್ಮೆ ಎನಿಸುತ್ತದೆ’ ಎಂದು ಪ್ರೊ.ಸಿದ್ದೇಗೌಡ ತಿಳಿಸಿದರು.</p>.<p>ಕ್ಯಾಂಪಸ್ನಲ್ಲಿ ಸಂಗ್ರಹವಾದ ತರಗೆಲೆ ಮತ್ತಿತರ ತ್ಯಾಜ್ಯಗಳನ್ನು ನಿತ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>