<p><strong>ತುಮಕೂರು</strong>: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮುಖಂಡರಲ್ಲಿ ಈಗಾಗಲೇ ಪೈಪೋಟಿ ಆರಂಭವಾಗಿದೆ. ಯಾವ ‘ಪ್ರಭಾವಿ’ಗೆ ಸ್ಥಾನ ಒಲಿಯಲಿದೆ ಎನ್ನುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.</p>.<p>ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ.ಶ್ರೀನಿವಾಸ್, ಉದ್ಯಮಿ ಎನ್.ಎಸ್.ಜಯಕುಮಾರ್, ಪಾಲಿಕೆ ಮಾಜಿ ಸದಸ್ಯ ಬಾವಿಕಟ್ಟೆ ನಾಗೇಶ್, ಲಕ್ಷ್ಮಿಶ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಸ್ಥಾನ ಪಡೆಯಲು ಆಕಾಂಕ್ಷಿಗಳು ತಮ್ಮದೇ ಆದ ಹಾದಿಯಲ್ಲಿ ಪ್ರಯತ್ನ ನಡೆಸಿದ್ದಾರೆ.</p>.<p>ಶ್ರೀನಿವಾಸ್ ಮತ್ತು ಲಕ್ಷ್ಮಿಶ್ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಪ್ರಮುಖರು. ಉದ್ಯಮಿ ಎನ್.ಎಸ್.ಜಯಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಆಪ್ತರು.</p>.<p>ಜಾತಿ ಲೆಕ್ಕಾಚಾರ, ಹಣ ಬಲ, ಪ್ರಭಾವವೇ ಆಕಾಂಕ್ಷಿಗಳಿಗೆ ಪ್ರಮುಖವಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿ.ಎಸ್.ಬಸವರಾಜ್, ಜೆ.ಸಿ.ಮಾಧುಸ್ವಾಮಿ ಅವರಿಗೆ ‘ಆಪ್ತ’ರಾದವರು ಹುದ್ದೆ ಪಡೆಯಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಬಿಜೆಪಿಯೊಳಗೆ ಕೇಳಿ ಬಂದಿವೆ.</p>.<p>ಅಧ್ಯಕ್ಷ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡುವಂತೆ ಇತ್ತೀಚೆಗೆ ನೇಕಾರ ಸಮುದಾಯದ ಧನಿಯಾಕುಮಾರ್ ಹಾಗೂ ಮಾದಿಗ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದರು. ‘ಪ್ರಭಾವಿ’ಗಳಿಗೆ ಅವಕಾಶ ಕಲ್ಪಿಸಿದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೂ ಅನುಕೂಲ ಎನ್ನುವ ಲೆಕ್ಕಾಚಾರಗಳು ಇದ್ದಂತೆ ಇವೆ.</p>.<p>ಲಿಂಗಾಯತರು ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿ ಮತ್ತು ರಾಜಕೀಯವಾಗಿಯೂ ಪ್ರಮುಖವಾಗಿರುವ ಕಾರಣ ಮತ್ತೆ ಅದೇ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟರೆ ಉಳಿದ ಸಮುದಾಯಗಳು ಸಹಜವಾಗಿ ಅಸಮಾಧಾನಗೊಳ್ಳಬಹುದು. ಈ ಕಾರಣದಿಂದ ಲಿಂಗಾಯತೇತರರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಲೆಕ್ಕಾಚಾರವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಎಂ.ಬಿ.ನಂದೀಶ್ ಆಯ್ಕೆಯಾಗಿರುವುದು ತುಮಕೂರು ನಗರದ ರಾಜಕಾರಣ ಏಕಪಕ್ಷೀಯವಲ್ಲ ಎನ್ನುವ ಸಂದೇಶವನ್ನು ತಲುಪಿಸಿದೆ. ಬಿಜೆಪಿ ತೀರ್ಮಾನಗಳಲ್ಲಿ ಸಂಘ ಪರಿವಾರದ ಮುಖಂಡರದ್ದೇ ಪ್ರಮುಖ ನಿರ್ಣಯ ಎನ್ನುವುದು ಬಹಿರಂಗ ಸತ್ಯ. ಈ ವಿಚಾರವಾಗಿ ನೋಡುವುದಾರೆ ‘ಸಂಘ’ದ ಪ್ರಭಾವವನ್ನು ಬಳಸಿ ಅಧ್ಯಕ್ಷ ಸ್ಥಾನ ಪಡೆಯುವ ಪ್ರಯತ್ನಗಳು ನಡೆದಿವೆ. ಅಲ್ಲದೆ ಈ ಎಲ್ಲ ಹೆಸರುಗಳ ನಡುವೆ ಹೊಸಬರು ಅಧ್ಯಕ್ಷ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.</p>.<p>‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕು. ಜಾತಿ, ಪ್ರಭಾವಗಳಿಗಿಂತ ಪಕ್ಷನಿಷ್ಠೆಯೇ ಪ್ರಮುಖವಾಗಬೇಕು’ ಎಂಬ ಬೇಡಿಕೆ ವ್ಯಕ್ತವಾಗಿದೆ.</p>.<p><strong>ಆಯುಕ್ತರ ಹುದ್ದೆಗೆ ನಾಗಣ್ಣ ಕಣ್ಣು</strong><br />ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ.ನಾಗಣ್ಣ, ಈ ಹಿಂದಿನಿಂದಲೂ ಟೂಡಾ ಆಯುಕ್ತರ ಹುದ್ದೆಯ ಮೇಲೆ ಕಣ್ಣಿಟ್ಟವರು. ಆ ಸ್ಥಾನಕ್ಕೆ ಬರಲು ಈ ಹಿಂದೆ ಪ್ರಯತ್ನ ಸಹ ನಡೆಸಿದ್ದರು. ಆ ಪ್ರಯತ್ನ ಈಗಲೂ ಮುಂದುವರಿದಿದ್ದು ಅವರು ಸಹ ಟೂಡಾಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುತ್ತವೆ ಮೂಲಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮುಖಂಡರಲ್ಲಿ ಈಗಾಗಲೇ ಪೈಪೋಟಿ ಆರಂಭವಾಗಿದೆ. ಯಾವ ‘ಪ್ರಭಾವಿ’ಗೆ ಸ್ಥಾನ ಒಲಿಯಲಿದೆ ಎನ್ನುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.</p>.<p>ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ.ಶ್ರೀನಿವಾಸ್, ಉದ್ಯಮಿ ಎನ್.ಎಸ್.ಜಯಕುಮಾರ್, ಪಾಲಿಕೆ ಮಾಜಿ ಸದಸ್ಯ ಬಾವಿಕಟ್ಟೆ ನಾಗೇಶ್, ಲಕ್ಷ್ಮಿಶ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಸ್ಥಾನ ಪಡೆಯಲು ಆಕಾಂಕ್ಷಿಗಳು ತಮ್ಮದೇ ಆದ ಹಾದಿಯಲ್ಲಿ ಪ್ರಯತ್ನ ನಡೆಸಿದ್ದಾರೆ.</p>.<p>ಶ್ರೀನಿವಾಸ್ ಮತ್ತು ಲಕ್ಷ್ಮಿಶ್ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಪ್ರಮುಖರು. ಉದ್ಯಮಿ ಎನ್.ಎಸ್.ಜಯಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಆಪ್ತರು.</p>.<p>ಜಾತಿ ಲೆಕ್ಕಾಚಾರ, ಹಣ ಬಲ, ಪ್ರಭಾವವೇ ಆಕಾಂಕ್ಷಿಗಳಿಗೆ ಪ್ರಮುಖವಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿ.ಎಸ್.ಬಸವರಾಜ್, ಜೆ.ಸಿ.ಮಾಧುಸ್ವಾಮಿ ಅವರಿಗೆ ‘ಆಪ್ತ’ರಾದವರು ಹುದ್ದೆ ಪಡೆಯಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಬಿಜೆಪಿಯೊಳಗೆ ಕೇಳಿ ಬಂದಿವೆ.</p>.<p>ಅಧ್ಯಕ್ಷ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡುವಂತೆ ಇತ್ತೀಚೆಗೆ ನೇಕಾರ ಸಮುದಾಯದ ಧನಿಯಾಕುಮಾರ್ ಹಾಗೂ ಮಾದಿಗ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದರು. ‘ಪ್ರಭಾವಿ’ಗಳಿಗೆ ಅವಕಾಶ ಕಲ್ಪಿಸಿದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೂ ಅನುಕೂಲ ಎನ್ನುವ ಲೆಕ್ಕಾಚಾರಗಳು ಇದ್ದಂತೆ ಇವೆ.</p>.<p>ಲಿಂಗಾಯತರು ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿ ಮತ್ತು ರಾಜಕೀಯವಾಗಿಯೂ ಪ್ರಮುಖವಾಗಿರುವ ಕಾರಣ ಮತ್ತೆ ಅದೇ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟರೆ ಉಳಿದ ಸಮುದಾಯಗಳು ಸಹಜವಾಗಿ ಅಸಮಾಧಾನಗೊಳ್ಳಬಹುದು. ಈ ಕಾರಣದಿಂದ ಲಿಂಗಾಯತೇತರರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಲೆಕ್ಕಾಚಾರವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಎಂ.ಬಿ.ನಂದೀಶ್ ಆಯ್ಕೆಯಾಗಿರುವುದು ತುಮಕೂರು ನಗರದ ರಾಜಕಾರಣ ಏಕಪಕ್ಷೀಯವಲ್ಲ ಎನ್ನುವ ಸಂದೇಶವನ್ನು ತಲುಪಿಸಿದೆ. ಬಿಜೆಪಿ ತೀರ್ಮಾನಗಳಲ್ಲಿ ಸಂಘ ಪರಿವಾರದ ಮುಖಂಡರದ್ದೇ ಪ್ರಮುಖ ನಿರ್ಣಯ ಎನ್ನುವುದು ಬಹಿರಂಗ ಸತ್ಯ. ಈ ವಿಚಾರವಾಗಿ ನೋಡುವುದಾರೆ ‘ಸಂಘ’ದ ಪ್ರಭಾವವನ್ನು ಬಳಸಿ ಅಧ್ಯಕ್ಷ ಸ್ಥಾನ ಪಡೆಯುವ ಪ್ರಯತ್ನಗಳು ನಡೆದಿವೆ. ಅಲ್ಲದೆ ಈ ಎಲ್ಲ ಹೆಸರುಗಳ ನಡುವೆ ಹೊಸಬರು ಅಧ್ಯಕ್ಷ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.</p>.<p>‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕು. ಜಾತಿ, ಪ್ರಭಾವಗಳಿಗಿಂತ ಪಕ್ಷನಿಷ್ಠೆಯೇ ಪ್ರಮುಖವಾಗಬೇಕು’ ಎಂಬ ಬೇಡಿಕೆ ವ್ಯಕ್ತವಾಗಿದೆ.</p>.<p><strong>ಆಯುಕ್ತರ ಹುದ್ದೆಗೆ ನಾಗಣ್ಣ ಕಣ್ಣು</strong><br />ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ.ನಾಗಣ್ಣ, ಈ ಹಿಂದಿನಿಂದಲೂ ಟೂಡಾ ಆಯುಕ್ತರ ಹುದ್ದೆಯ ಮೇಲೆ ಕಣ್ಣಿಟ್ಟವರು. ಆ ಸ್ಥಾನಕ್ಕೆ ಬರಲು ಈ ಹಿಂದೆ ಪ್ರಯತ್ನ ಸಹ ನಡೆಸಿದ್ದರು. ಆ ಪ್ರಯತ್ನ ಈಗಲೂ ಮುಂದುವರಿದಿದ್ದು ಅವರು ಸಹ ಟೂಡಾಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುತ್ತವೆ ಮೂಲಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>