ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿಗೆ ಹರಿದ ಕೆರೆ ನೀರು: ವಾಹನ ಸಂಚಾರಕ್ಕೆ ಅಡ್ಡಿ

Last Updated 20 ಅಕ್ಟೋಬರ್ 2022, 4:47 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಕೋರಾ ಹೋಬಳಿ ವ್ಯಾಪ್ತಿಯ ವಿವಿಧ ಕೆರೆಗಳ ನೀರು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿದ್ದು, ಹೆದ್ದಾರಿಯ ಒಂದು ಬದಿಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ‌.

ಕೋರಾ ಹೋಬಳಿ ಹಂಚಿಹಳ್ಳಿಯ ಪರಿಶಿಷ್ಟರ ಕಾಲೊನಿ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿವೆ. ಹೋಬಳಿಯಾದ್ಯಂತ ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಬ್ರಹ್ಮಸಂದ್ರ, ಕೆಸ್ತೂರು, ಹಿರೇತೊಟ್ಲುಕೆರೆ, ಚಿಕ್ಕತೊಟ್ಲುಕೆರೆ, ಮೆಳೇಹಳ್ಳಿ ಕೆರೆ ನೀರು ಹೆಬ್ಬಾಕ ಕೆರೆ ಪ್ರವೇಶಿಸುತ್ತಿದ್ದು, ಹೆಬ್ಬಾಕ ಕೆರೆಯ ಹಿನ್ನೀರಿನ ಪ್ರದೇಶವೂ ಜಲಾವೃತವಾಗಿದೆ.

ಊರುಕೆರೆ ಸಮೀಪವಿರುವ ಜೈನ್ ಪಬ್ಲಿಕ್ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಊರುಕೆರೆ ಕಡೆಯಿಂದ ಮೆಳೇಹಳ್ಳಿ- ಬ್ರಹ್ಮಸಂದ್ರ- ಕೆಸ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ನೀರಿನಿಂದ ಆವೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT