<p><strong>ತುರುವೇಕೆರೆ:</strong> ತಾಲ್ಲೂಕಿನ ಮಾವಿನಕೆರೆ, ಮೇಲಿನವರಗೇನಹಳ್ಳಿ ಮತ್ತು ಬೆಂಕಿಕೆರೆಯಲ್ಲಿ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.</p>.<p>ಮಾವಿನಕೆರೆಯಲ್ಲಿ 380 ಮನೆಗಳಿಗೆ ₹69 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ಮೇಲಿನವರಗೇನಹಳ್ಳಿಯಲ್ಲಿ 427 ಮನೆಗಳಿಗೆ ₹77 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಬೆಂಕಿಕೆರೆಯಲ್ಲಿ 156 ಮನೆಗಳಿಗೆ ₹48 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ನೀಡಲಾಗುತ್ತಿದೆ ಎಂದರು.</p>.<p>ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮೂರು ಗ್ರಾಮಗಳಲ್ಲೂ ಪ್ರತ್ಯೇಕವಾಗಿ ನೀರಿಗಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಸುಮಾರು ಮುವತ್ತು ವರ್ಷಗಳ ತನಕ ಈ ಯೋಜನೆ ಕಾರ್ಯಗತ ಆಗಬೇಕಿದೆ ಎಂದರು.</p>.<p>ಮೋಹನ್ ಕುಮಾರ್, ತಾತಯ್ಯ, ಬಲರಾಮೇಗೌಡ, ಶಿವಣ್ಣ, ರೇಣುಕಯ್ಯ, ಜಗದೀಶ್, ಬಲರಾಮಯ್ಯ, ಶಿವಣ್ಣ, ರಾಜಕುಮಾರ್, ಸತೀಶ್ ಕುಮಾರ್, ವಿಜಯೇಂದ್ರ ಕುಮಾರ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ:</strong> ತಾಲ್ಲೂಕಿನ ಮಾವಿನಕೆರೆ, ಮೇಲಿನವರಗೇನಹಳ್ಳಿ ಮತ್ತು ಬೆಂಕಿಕೆರೆಯಲ್ಲಿ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.</p>.<p>ಮಾವಿನಕೆರೆಯಲ್ಲಿ 380 ಮನೆಗಳಿಗೆ ₹69 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ಮೇಲಿನವರಗೇನಹಳ್ಳಿಯಲ್ಲಿ 427 ಮನೆಗಳಿಗೆ ₹77 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಬೆಂಕಿಕೆರೆಯಲ್ಲಿ 156 ಮನೆಗಳಿಗೆ ₹48 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ನೀಡಲಾಗುತ್ತಿದೆ ಎಂದರು.</p>.<p>ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮೂರು ಗ್ರಾಮಗಳಲ್ಲೂ ಪ್ರತ್ಯೇಕವಾಗಿ ನೀರಿಗಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಸುಮಾರು ಮುವತ್ತು ವರ್ಷಗಳ ತನಕ ಈ ಯೋಜನೆ ಕಾರ್ಯಗತ ಆಗಬೇಕಿದೆ ಎಂದರು.</p>.<p>ಮೋಹನ್ ಕುಮಾರ್, ತಾತಯ್ಯ, ಬಲರಾಮೇಗೌಡ, ಶಿವಣ್ಣ, ರೇಣುಕಯ್ಯ, ಜಗದೀಶ್, ಬಲರಾಮಯ್ಯ, ಶಿವಣ್ಣ, ರಾಜಕುಮಾರ್, ಸತೀಶ್ ಕುಮಾರ್, ವಿಜಯೇಂದ್ರ ಕುಮಾರ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>