ಗ್ರಾಮದ ರಾಮಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕೃಷಿ ಹೊಂಡ ಇದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಈ ಕೃಷಿ ಹೊಂಡದಲ್ಲಿ ನೀರು ತುಂಬಿದೆ. ಪಕ್ಕದ ಜಮೀನಿನಲ್ಲಿಆರ್.ಕೃಷ್ಣಮೂರ್ತಿ ಹಾಗೂ ಅರುಣಶ್ರೀ ಕಳೆ ತೆಗೆಯುತ್ತಿದ್ದಾಗ, ಆಟವಾಡಿಕೊಂಡಿದ್ದ ಶರತ್ ಮತ್ತು ಲೋಚನಾ ಕೃಷಿ ಹೊಂಡದ ಸಮೀಪ ತೆರಳಿದ್ದಾರೆ. ತಂಗಿ ಲೋಚನಾ ಕೃಷಿ ಹೊಂಡದಲ್ಲಿ ಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋಗಿ ಅಣ್ಣ ಶರತ್ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.