ಕೊರಟಗೆರೆ: ಕೆರೆ ನೀರು ನೋಡಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತುಂಬಾಡಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕೃಷ್ಣಪ್ಪ (45), ನಿತಿನ್ (9) ಮೃತಪಟ್ಟವರು. ಕೆರೆ ನೋಡಲು ಹೋಗಿದ್ದ ವೇಳೆ ಘಟನೆ ಆಕಸ್ಮಿಕವಾಗಿ ನಡೆದಿದೆ. ನಿತಿನ್ ನೀರಿನಲ್ಲಿ ಮುಳುಗುತ್ತಿದ್ದ ಸಮಯದಲ್ಲಿ ರಕ್ಷಣೆಗೆ ಮುಂದಾದ ಕೃಷ್ಣಪ್ಪ ಸಹ ನೀರಿನ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.