<p><strong>ತುಮಕೂರು</strong>: ಅಷ್ಟೈಶ್ವರ್ಯ ಕರುಣಿಸುವ ವರಮಹಾಲಕ್ಷ್ಮಿ ಹಬ್ಬ ನಗರದಲ್ಲಿ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳ ಆಚರಣೆಗೆ ಮೊರೆಹೋಗಿದ್ದರು.</p>.<p>ಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಅಕ್ಕಪಕ್ಕದ ಒಂದೆರಡು ಮನೆಯವರನ್ನಷ್ಟೇ ಪೂಜೆಗೆ ಕರೆದು ಅರಿಸಿನ, ಕುಂಕುಮ, ಭಾಗಿನ ಕೊಟ್ಟು ಆಶೀರ್ವಾದ ಪಡೆದರು. ಒಬ್ಬಟ್ಟು, ಕರ್ಜಿಕಾಯಿ, ಕರಿಗಡುಬು ಮತ್ತಿತರ ಸಿಹಿ ಅಡುಗೆ ಮಾಡಿ ಲಕ್ಷ್ಮಿಗೆ ನೈವೇದ್ಯಕ್ಕಿಟ್ಟು ಬಳಿಕ ಸವಿದರು.</p>.<p>ಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡುವುದು ಈ ಹಬ್ಬದ ವಿಶೇಷಗಳಲ್ಲಿ ಒಂದು. ಸುಂದರ ಮಂಟಪ ನಿರ್ಮಿಸಿ ವೈವಿಧ್ಯಮಯವಾಗಿ ಅಲಂಕರಿಸಿ ಲಕ್ಷ್ಮಿಯನ್ನು ಕೂರಿಸಿ ಸಂಭ್ರಮಿಸಿದರು. ಕೊರೊನಾ ಕಾರಣ ಮನೆಮಂದಿಯೆಲ್ಲ ಮನೆಯಲ್ಲೇ ಇರುವುದರಿಂದ ಅಲಂಕಾರಕ್ಕೆ ಎಲ್ಲರೂ ಕೈಜೋಡಿಸಿ ಖುಷಿಪಟ್ಟರು. ನೈವೇದ್ಯ, ಹಣ್ಣಿನ ಜತೆಗೆ ಒಡವೆ, ಹಣವಿಟ್ಟು ನಮಿಸಿದರು.</p>.<p>ಈ ಹಬ್ಬದಲ್ಲಿ ಮುತ್ತೈದೆಯರಿಗೆ ಭಾಗಿನ ಕೊಡುವ ಸಂಪ್ರದಾಯ ಮಹತ್ವವಾದುದು. ಆದರೆ, ಕೊರೊನಾ ಪರಿಣಾಮ ಈ ಆಚರಣೆಗೆ ಅಲ್ಪ ತಡೆ ಬಿದ್ದಿದೆ. ಅಪರಿಚಿತರನ್ನು ಕುಂಕುಮಕ್ಕೆ ಕರೆದರೂ ನಿರಾಕರಿಸದೆ ಬರುತ್ತಿದ್ದವರು ಈ ಬಾರಿ ಬೇರೆಯವರ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.</p>.<p>‘ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ನಮ್ಮ ಮನೆಗೆ ನೂರಾರು ಮುತ್ತೈದೆಯರು ಭಾಗಿನ ಪಡೆಯಲು ಬರುತ್ತಿದ್ದರು. ಪ್ರತಿವರ್ಷವೂ ಬಿಡುವಿಲ್ಲದ ಕೆಲಸವಿರುತ್ತಿತ್ತು. ಆದರೆ, ಈ ಬಾರಿ ಸಂಭ್ರಮ ಇಲ್ಲವಾಗಿದೆ. ಸರಳವಾಗಿ ಆಚರಿಸಿದ್ದೇವೆ.ಬಹುತೇಕರು ಕರೆಮಾಡಿ ಈ ಬಾರಿ ಭಾಗಿನಕ್ಕೆ ಬರುವುದಿಲ್ಲ ಕರೆಯಬೇಡಿ ಎಂದು ಹೇಳಿದರು. ಕೊರೊನಾ ಈ ಬಗೆಯ ಭಯ ಸೃಷ್ಟಿಸಿದೆ’ ಎಂದು ಗಾಂಧಿನಗರದ ನಿವಾಸಿ ಹರ್ಷವರ್ಧಿನಿ ಪ್ರಸೂನ್ ಹೇಳಿದರು.</p>.<p class="Subhead">ದೇಗುಲಗಳಲ್ಲಿ ವಿಶೇಷ ಪೂಜೆ: ಇನ್ನು ನಗರದ ಲಕ್ಷ್ಮಿ ದೇವಾಲಯಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಕೊರೊನಾ ಆತಂಕದಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆಯೂ ಕಡಿಮೆಯಿತ್ತು.</p>.<p class="Subhead">***</p>.<p>ಈ ಬಾರಿಯೂ ಹಳೆಯ ಅಲಂಕಾರ</p>.<p>ಗಾಂಧಿನಗರದ ಹರ್ಷವರ್ಧಿನಿ ಅವರು ಪ್ರತಿ ವರ್ಷವೂ ಒಂದೊಂದು ಬಗೆಯ ಅಲಂಕಾರ ಮಾಡಿ ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಆ ಅಲಂಕಾರವನ್ನು ವರ್ಷಪೂರ್ತಿ ಉಳಿಸಿಕೊಳ್ಳುತ್ತಾರೆ. ಮುಂದಿನ ವರ್ಷಕ್ಕೆ ಅದನ್ನು ತೆರವು ಮಾಡಿ ಬೇರೆ ಬಗೆಯ ಅಲಂಕಾರ ಮಾಡುತ್ತಾರೆ. ಅದಕ್ಕಾಗಿ ಅವರು ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಈ ಬಾರಿ ಲಾಕ್ಡೌನ್ ಕಾರಣದಿಂದ ಅಗತ್ಯದ ವಸ್ತುಗಳು ಸಿಗದಿದೆ ಕಳೆದ ವರ್ಷದ ಅಲಂಕಾರವನ್ನೇ ಉಳಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಅಷ್ಟೈಶ್ವರ್ಯ ಕರುಣಿಸುವ ವರಮಹಾಲಕ್ಷ್ಮಿ ಹಬ್ಬ ನಗರದಲ್ಲಿ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳ ಆಚರಣೆಗೆ ಮೊರೆಹೋಗಿದ್ದರು.</p>.<p>ಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಅಕ್ಕಪಕ್ಕದ ಒಂದೆರಡು ಮನೆಯವರನ್ನಷ್ಟೇ ಪೂಜೆಗೆ ಕರೆದು ಅರಿಸಿನ, ಕುಂಕುಮ, ಭಾಗಿನ ಕೊಟ್ಟು ಆಶೀರ್ವಾದ ಪಡೆದರು. ಒಬ್ಬಟ್ಟು, ಕರ್ಜಿಕಾಯಿ, ಕರಿಗಡುಬು ಮತ್ತಿತರ ಸಿಹಿ ಅಡುಗೆ ಮಾಡಿ ಲಕ್ಷ್ಮಿಗೆ ನೈವೇದ್ಯಕ್ಕಿಟ್ಟು ಬಳಿಕ ಸವಿದರು.</p>.<p>ಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡುವುದು ಈ ಹಬ್ಬದ ವಿಶೇಷಗಳಲ್ಲಿ ಒಂದು. ಸುಂದರ ಮಂಟಪ ನಿರ್ಮಿಸಿ ವೈವಿಧ್ಯಮಯವಾಗಿ ಅಲಂಕರಿಸಿ ಲಕ್ಷ್ಮಿಯನ್ನು ಕೂರಿಸಿ ಸಂಭ್ರಮಿಸಿದರು. ಕೊರೊನಾ ಕಾರಣ ಮನೆಮಂದಿಯೆಲ್ಲ ಮನೆಯಲ್ಲೇ ಇರುವುದರಿಂದ ಅಲಂಕಾರಕ್ಕೆ ಎಲ್ಲರೂ ಕೈಜೋಡಿಸಿ ಖುಷಿಪಟ್ಟರು. ನೈವೇದ್ಯ, ಹಣ್ಣಿನ ಜತೆಗೆ ಒಡವೆ, ಹಣವಿಟ್ಟು ನಮಿಸಿದರು.</p>.<p>ಈ ಹಬ್ಬದಲ್ಲಿ ಮುತ್ತೈದೆಯರಿಗೆ ಭಾಗಿನ ಕೊಡುವ ಸಂಪ್ರದಾಯ ಮಹತ್ವವಾದುದು. ಆದರೆ, ಕೊರೊನಾ ಪರಿಣಾಮ ಈ ಆಚರಣೆಗೆ ಅಲ್ಪ ತಡೆ ಬಿದ್ದಿದೆ. ಅಪರಿಚಿತರನ್ನು ಕುಂಕುಮಕ್ಕೆ ಕರೆದರೂ ನಿರಾಕರಿಸದೆ ಬರುತ್ತಿದ್ದವರು ಈ ಬಾರಿ ಬೇರೆಯವರ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.</p>.<p>‘ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ನಮ್ಮ ಮನೆಗೆ ನೂರಾರು ಮುತ್ತೈದೆಯರು ಭಾಗಿನ ಪಡೆಯಲು ಬರುತ್ತಿದ್ದರು. ಪ್ರತಿವರ್ಷವೂ ಬಿಡುವಿಲ್ಲದ ಕೆಲಸವಿರುತ್ತಿತ್ತು. ಆದರೆ, ಈ ಬಾರಿ ಸಂಭ್ರಮ ಇಲ್ಲವಾಗಿದೆ. ಸರಳವಾಗಿ ಆಚರಿಸಿದ್ದೇವೆ.ಬಹುತೇಕರು ಕರೆಮಾಡಿ ಈ ಬಾರಿ ಭಾಗಿನಕ್ಕೆ ಬರುವುದಿಲ್ಲ ಕರೆಯಬೇಡಿ ಎಂದು ಹೇಳಿದರು. ಕೊರೊನಾ ಈ ಬಗೆಯ ಭಯ ಸೃಷ್ಟಿಸಿದೆ’ ಎಂದು ಗಾಂಧಿನಗರದ ನಿವಾಸಿ ಹರ್ಷವರ್ಧಿನಿ ಪ್ರಸೂನ್ ಹೇಳಿದರು.</p>.<p class="Subhead">ದೇಗುಲಗಳಲ್ಲಿ ವಿಶೇಷ ಪೂಜೆ: ಇನ್ನು ನಗರದ ಲಕ್ಷ್ಮಿ ದೇವಾಲಯಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಕೊರೊನಾ ಆತಂಕದಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆಯೂ ಕಡಿಮೆಯಿತ್ತು.</p>.<p class="Subhead">***</p>.<p>ಈ ಬಾರಿಯೂ ಹಳೆಯ ಅಲಂಕಾರ</p>.<p>ಗಾಂಧಿನಗರದ ಹರ್ಷವರ್ಧಿನಿ ಅವರು ಪ್ರತಿ ವರ್ಷವೂ ಒಂದೊಂದು ಬಗೆಯ ಅಲಂಕಾರ ಮಾಡಿ ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಆ ಅಲಂಕಾರವನ್ನು ವರ್ಷಪೂರ್ತಿ ಉಳಿಸಿಕೊಳ್ಳುತ್ತಾರೆ. ಮುಂದಿನ ವರ್ಷಕ್ಕೆ ಅದನ್ನು ತೆರವು ಮಾಡಿ ಬೇರೆ ಬಗೆಯ ಅಲಂಕಾರ ಮಾಡುತ್ತಾರೆ. ಅದಕ್ಕಾಗಿ ಅವರು ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಈ ಬಾರಿ ಲಾಕ್ಡೌನ್ ಕಾರಣದಿಂದ ಅಗತ್ಯದ ವಸ್ತುಗಳು ಸಿಗದಿದೆ ಕಳೆದ ವರ್ಷದ ಅಲಂಕಾರವನ್ನೇ ಉಳಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>