‘ಗೊಂದಲಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಯುಜಿಸಿಗೆ ಇ–ಮೇಲ್ ಮಾಡಲಾಗಿದೆ. ಯುಜಿಸಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಶ್ವವಿದ್ಯಾಲಯ, ಯುಜಿಸಿ ನಡೆಯಿಂದ ಸಂಶೋಧನಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಯುಜಿಸಿಯಿಂದ ಶಿಷ್ಯ ವೇತನ ಪಡೆಯುತ್ತಿದ್ದೇವೆ ಎಂಬುವುದನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ನಿಯಮಬಾಹಿರವಾಗಿ ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ದೂರಿದ್ದಾರೆ.