ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ರೂಪಿಸಿರುವ ಹೇಮಾವತಿ, ಎತ್ತಿನಹೊಳೆ ಯೋಜನೆಯಿಂದ ಹತ್ತಾರು ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬಹುದು. ಕೋರ, ಕೆಸ್ತೂರು, ಮಾವುಕೆರೆ, ಚಿಕ್ಕತೊಟ್ಲುಕೆರೆ, ದೇವಲಾಪುರ, ಬ್ರಹ್ಮಸಂದ್ರ ಗ್ರಾಮಗಳ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಲ್ಲಿ ಅರ್ಧ ಟಿಎಂಸಿ ನೀರು ನಿಗದಿ ಪಡಿಸಿ ಕೆರೆಗಳನ್ನು ತುಂಬಿಸಲು ಯೋಜನೆ ಸಿದ್ಧಗೊಂಡಿದೆ ಎಂದರು.