ಮಿಡಿಸೌತೆ ಹಾಗೂ ತರಕಾರಿ ಬೆಳೆಗಳನ್ನು ನಾಟಿಯಿಂದ ಹಿಡಿದು ಕೊನೆವರೆಗೂ ರಾತ್ರಿ ವೇಳೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ರಾಗಿ, ನವಣೆ, ಸಾಮೆ ಸೇರಿದಂತೆ ಕಿರುಧಾನ್ಯಗಳ ತೆನೆಯನ್ನು ನಾಶ ಮಾಡಿ ಕೈಗೆ ಬಂದ ತುತ್ತು ಕೈಗೆ ಬಾರದ ಸ್ಥಿತಿ ತಂದೊಡ್ಡುತ್ತವೆ. ತೆಂಗಿನಮರಗಳಿಂದ ರಾತ್ರಿ ವೇಳೆ ಬಿದ್ದ ಕಾಯಿಗಳನ್ನು ಸುಲಿದು ತಿನ್ನುತ್ತವೆ. ಪ್ರತಿಯೊಂದು ತೋಟಗಳಲ್ಲಿಯೂ ರಾತ್ರಿ ವೇಳೆ ಬಿದ್ದ ತೆಂಗಿನಕಾಯಿಗಳು ರೈತರಿಗೆ ದಕ್ಕುವುದಿಲ್ಲ. ಮರಿಗಳ ಸಮೇತ ಗುಂಪು ಗುಂಪು ಕಾಡುಹಂದಿಗಳು ಒಮ್ಮೆ ರೈತರ ಹೊಲಗಳಿಗೆ ನುಗ್ಗುತ್ತವೆ ಎಂದು ಮೇಲನಹಳ್ಳಿ ಗ್ರಾಮದ ರೈತ ಮೇಲಪ್ಪ ಹೇಳುತ್ತಾರೆ.