<p><strong>ಕುಣಿಗಲ್:</strong>ಲಾಕ್ಡೌನ್ ನಿಯಮ ಸಡಲಿಕೆಯಿಂದಾಗಿ ತಾಲ್ಲೂಕಿನ ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಆದಾಯ ಸಂಗ್ರಹಣೆಯಲ್ಲೂ ಏರಿಕೆಯಾಗಿದೆ.</p>.<p>ಲಾಕ್ಡೌನ್ನಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಅನೇಕ ದಿನ ಭಕ್ತರಿಲ್ಲದೆ ಅರ್ಚಕರು ಮಾತ್ರ ಪೂಜೆ ನೆರೆವೇರಿಸಿದ್ದರು. </p>.<p>ಮೊದಲ ಹಂತದ ಲಾಕ್ಡೌನ್ ಸಡಿಲಿಕೆಯಾದಾಗ ಕೊರೊನಾ ಭಯದಿಂದ ನಿತ್ಯ 500ರಿಂದ 1,000 ಜನರು ಮಾತ್ರ ಭೇಟಿ ನೀಡುತ್ತಿದ್ದರು.</p>.<p>ಆಗಸ್ಟ್ನಲ್ಲಿ ಲಾಕ್ಡೌನ್ ನಿಯಮಗಳಲ್ಲಿ ಮತ್ತಷ್ಟು ಸಡಿಲಿಕೆಯಾಗಿತ್ತು. ಕೋವಿಡ್ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಕ್ತರ ಸಂಖ್ಯೆ 5 ಸಾವಿರದಿಂದ 6 ಸಾವಿರಕ್ಕೇರಿತು ಎಂದು ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.</p>.<p>ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕಳೆದ 47 ದಿನಗಳಲ್ಲಿ ₹ 19.83 ಲಕ್ಷ ಸಂಗ್ರಹವಾಗಿದೆ. ಅಕ್ಟೋಬರ್ 2ರಂದು 10 ಸಾವಿರ, 4ರಂದು 6 ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.</p>.<p>ಎಣಿಕೆಯಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ವ್ಯವಸ್ಥಾಪಕ ಮಂಜುನಾಥ್, ಎಸ್ಬಿಐ ವ್ಯವಸ್ಥಾಪಕಿ ರೇವತಿ, ಎಂಜನಿಯರ್ ರೇಣುಕಾ ಪ್ರಸಾದ್, ಲೆಕ್ಕಿಗರಾದ ತಿಮ್ಮದಾಸಯ್ಯ, ಶರಣ್, ನಾಗರಾಜು, ಚಂದ್ರಯ್ಯ ಇದ್ದರು.</p>.<p>ಅಕ್ಟೋಬರ್ 2ರಂದು 10 ಸಾವಿರ, 4ರಂದು ಭಾನುವಾರ 6ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong>ಲಾಕ್ಡೌನ್ ನಿಯಮ ಸಡಲಿಕೆಯಿಂದಾಗಿ ತಾಲ್ಲೂಕಿನ ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಆದಾಯ ಸಂಗ್ರಹಣೆಯಲ್ಲೂ ಏರಿಕೆಯಾಗಿದೆ.</p>.<p>ಲಾಕ್ಡೌನ್ನಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಅನೇಕ ದಿನ ಭಕ್ತರಿಲ್ಲದೆ ಅರ್ಚಕರು ಮಾತ್ರ ಪೂಜೆ ನೆರೆವೇರಿಸಿದ್ದರು. </p>.<p>ಮೊದಲ ಹಂತದ ಲಾಕ್ಡೌನ್ ಸಡಿಲಿಕೆಯಾದಾಗ ಕೊರೊನಾ ಭಯದಿಂದ ನಿತ್ಯ 500ರಿಂದ 1,000 ಜನರು ಮಾತ್ರ ಭೇಟಿ ನೀಡುತ್ತಿದ್ದರು.</p>.<p>ಆಗಸ್ಟ್ನಲ್ಲಿ ಲಾಕ್ಡೌನ್ ನಿಯಮಗಳಲ್ಲಿ ಮತ್ತಷ್ಟು ಸಡಿಲಿಕೆಯಾಗಿತ್ತು. ಕೋವಿಡ್ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಕ್ತರ ಸಂಖ್ಯೆ 5 ಸಾವಿರದಿಂದ 6 ಸಾವಿರಕ್ಕೇರಿತು ಎಂದು ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.</p>.<p>ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕಳೆದ 47 ದಿನಗಳಲ್ಲಿ ₹ 19.83 ಲಕ್ಷ ಸಂಗ್ರಹವಾಗಿದೆ. ಅಕ್ಟೋಬರ್ 2ರಂದು 10 ಸಾವಿರ, 4ರಂದು 6 ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.</p>.<p>ಎಣಿಕೆಯಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ವ್ಯವಸ್ಥಾಪಕ ಮಂಜುನಾಥ್, ಎಸ್ಬಿಐ ವ್ಯವಸ್ಥಾಪಕಿ ರೇವತಿ, ಎಂಜನಿಯರ್ ರೇಣುಕಾ ಪ್ರಸಾದ್, ಲೆಕ್ಕಿಗರಾದ ತಿಮ್ಮದಾಸಯ್ಯ, ಶರಣ್, ನಾಗರಾಜು, ಚಂದ್ರಯ್ಯ ಇದ್ದರು.</p>.<p>ಅಕ್ಟೋಬರ್ 2ರಂದು 10 ಸಾವಿರ, 4ರಂದು ಭಾನುವಾರ 6ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>