<p><strong>ಮಧುಗಿರಿ:</strong> ಸುಪ್ರೀಂ ಕೋರ್ಟ್ನಲ್ಲಿ ಗ್ರೀನ್ ಸಿಗ್ನಲ್ ದೊರೆತರೆ ಮಳೆಗಾಲಕ್ಕೆ ಮಧುಗಿರಿಗೆ ಎತ್ತಿನಹೊಳೆ ನೀರು ಬರುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಒಂದಷ್ಟು ಸಮಸ್ಯೆಯಾಗಿರುವುದರಿಂದ ನೀರು ಬರುವುದಕ್ಕೆ ಹಿನ್ನಡೆಯಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.</p>.<p>ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಸುಮಾರು 40 ಸೆಟ್ ಮೋಟರ್-ಪಂಪ್ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.</p>.<p>‘ಹಿಂದೆ ಕ್ರಿಟಿಕಲ್ ಇದ್ದಂತಹ ಸಕಲೇಶಪುರದಲ್ಲಿ ಎಂಟು ವೇರ್ಗಳಲ್ಲೂ ನೀರನ್ನು ಪಂಪ್ ಮಾಡುವಂತಹ ಕೆಲಸ ಮಾಡಿಸಿದ್ದೆ. ನಮಗೆ ಒಂದು ದುರ್ದೈವವೆಂದರೆ ಈ ಕಡೆ ಲೈನ್ ಸರಿಯಾಗಿ ಕ್ಲಿಯರ್ ಆಗದ ಕಾರಣ ಅಲ್ಲಿನ ನೀರನ್ನು ನಾವು ವಾಣಿವಿಲಾಸ ಡ್ಯಾಂಗೆ ಬಿಡುತ್ತಿದ್ದೇವೆ. ಅಲ್ಲಿಂದ ನೀರು ಸರಾಗವಾಗಿ ಕೆರೆಗಳಿಗೆ ಹರಿಸಲು ಕೆಲಸವನ್ನು ತಾಲ್ಲೂಕಿನಲ್ಲಿ ಈಗಾಗಲೇ ₹300 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಸುಪ್ರೀಂಕೋರ್ಟ್ನಿಂದ ಗ್ರೀನ್ ಸಿಗ್ನಲ್ ದೊರೆತರೆ ಕೆರೆಗಳಿಗೆ ಮಳೆಗಾಲದ ವೇಳೆಗೆ ನೀರು ಹರಿಯುವ ನಿರೀಕ್ಷೆಯಿದೆ’ ಎಂದರು.</p>.<p>ಸಣ್ಣ ನೀರಾವರಿ ಇಲಾಖೆ ಎಇಇ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜುಕಿರಣ್, ತಹಶೀಲ್ದಾರ್ ಶ್ರೀನಿವಾಸ್, ಎಒ ಲಕ್ಷ್ಮಣ್, ವಲಯ ಅರಣಾಧಿಕಾರಿ ಸುರೇಶ್, ಜಿ.ಜೆ.ರಾಜಣ್ಣ, ಮಲ್ಲಿಕಾರ್ಜುನ್, ನಾಗೇಶ್ ಬಾಬು, ಗಂಗಣ್ಣ, ಎಂ.ಪಿ. ಕಾಂತರಾಜು, ಸಿದ್ದಾಪುರ ರಂಗಸ್ವಾಮಿ, ರಾಜಶೇಖರ್ ರೆಡ್ಡಿ ಹಾಗೂ ರೈತರು ಹಾಜರಿದ್ದರು.</p>.<div><blockquote>ಹಿಂದಿನ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5 ಸಾವಿರ ಕೋಟಿಯನ್ನೇ ಕೇಂದ್ರ ಸರ್ಕಾರ ನೀಡಿಲ್ಲ. ಈ ಬಾರಿಯ ಬಜೆಟ್ನಲ್ಲಿ ಹೊಸದಾಗಿ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲ.</blockquote><span class="attribution"> ಕೆ.ಎನ್. ರಾಜಣ್ಣ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ:</strong> ಸುಪ್ರೀಂ ಕೋರ್ಟ್ನಲ್ಲಿ ಗ್ರೀನ್ ಸಿಗ್ನಲ್ ದೊರೆತರೆ ಮಳೆಗಾಲಕ್ಕೆ ಮಧುಗಿರಿಗೆ ಎತ್ತಿನಹೊಳೆ ನೀರು ಬರುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಒಂದಷ್ಟು ಸಮಸ್ಯೆಯಾಗಿರುವುದರಿಂದ ನೀರು ಬರುವುದಕ್ಕೆ ಹಿನ್ನಡೆಯಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.</p>.<p>ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಸುಮಾರು 40 ಸೆಟ್ ಮೋಟರ್-ಪಂಪ್ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.</p>.<p>‘ಹಿಂದೆ ಕ್ರಿಟಿಕಲ್ ಇದ್ದಂತಹ ಸಕಲೇಶಪುರದಲ್ಲಿ ಎಂಟು ವೇರ್ಗಳಲ್ಲೂ ನೀರನ್ನು ಪಂಪ್ ಮಾಡುವಂತಹ ಕೆಲಸ ಮಾಡಿಸಿದ್ದೆ. ನಮಗೆ ಒಂದು ದುರ್ದೈವವೆಂದರೆ ಈ ಕಡೆ ಲೈನ್ ಸರಿಯಾಗಿ ಕ್ಲಿಯರ್ ಆಗದ ಕಾರಣ ಅಲ್ಲಿನ ನೀರನ್ನು ನಾವು ವಾಣಿವಿಲಾಸ ಡ್ಯಾಂಗೆ ಬಿಡುತ್ತಿದ್ದೇವೆ. ಅಲ್ಲಿಂದ ನೀರು ಸರಾಗವಾಗಿ ಕೆರೆಗಳಿಗೆ ಹರಿಸಲು ಕೆಲಸವನ್ನು ತಾಲ್ಲೂಕಿನಲ್ಲಿ ಈಗಾಗಲೇ ₹300 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಸುಪ್ರೀಂಕೋರ್ಟ್ನಿಂದ ಗ್ರೀನ್ ಸಿಗ್ನಲ್ ದೊರೆತರೆ ಕೆರೆಗಳಿಗೆ ಮಳೆಗಾಲದ ವೇಳೆಗೆ ನೀರು ಹರಿಯುವ ನಿರೀಕ್ಷೆಯಿದೆ’ ಎಂದರು.</p>.<p>ಸಣ್ಣ ನೀರಾವರಿ ಇಲಾಖೆ ಎಇಇ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜುಕಿರಣ್, ತಹಶೀಲ್ದಾರ್ ಶ್ರೀನಿವಾಸ್, ಎಒ ಲಕ್ಷ್ಮಣ್, ವಲಯ ಅರಣಾಧಿಕಾರಿ ಸುರೇಶ್, ಜಿ.ಜೆ.ರಾಜಣ್ಣ, ಮಲ್ಲಿಕಾರ್ಜುನ್, ನಾಗೇಶ್ ಬಾಬು, ಗಂಗಣ್ಣ, ಎಂ.ಪಿ. ಕಾಂತರಾಜು, ಸಿದ್ದಾಪುರ ರಂಗಸ್ವಾಮಿ, ರಾಜಶೇಖರ್ ರೆಡ್ಡಿ ಹಾಗೂ ರೈತರು ಹಾಜರಿದ್ದರು.</p>.<div><blockquote>ಹಿಂದಿನ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5 ಸಾವಿರ ಕೋಟಿಯನ್ನೇ ಕೇಂದ್ರ ಸರ್ಕಾರ ನೀಡಿಲ್ಲ. ಈ ಬಾರಿಯ ಬಜೆಟ್ನಲ್ಲಿ ಹೊಸದಾಗಿ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲ.</blockquote><span class="attribution"> ಕೆ.ಎನ್. ರಾಜಣ್ಣ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>