<p><strong>ವೈ.ಎನ್. ಹೊಸಕೋಟೆ (ಪಾವಗಡ ತಾಲ್ಲೂಕು):</strong> ಹೋಬಳಿಯ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಗೋಡೆಗಳು ಜಖಂಗೊಂಡಿವೆ.</p>.<p>ಕಚೇರಿಯ ಹಿಂಭಾಗದ ಕಿಟಕಿ ಯನ್ನು ಕಿತ್ತು ಒಳ ನುಸುಳಿರುವ ದುಷ್ಕ ರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸಭಾಂ ಗಣದ ಮೂಲೆಯಲ್ಲಿನ ಕುರ್ಚಿ ಮೇಲೆ ಸ್ಫೋಟ ನಡೆಸಿದಂತೆ ಕಂಡುಬಂದಿದ್ದು, ಕುರ್ಚಿಗಳು ಸುಟ್ಟು ಹೋಗಿವೆ.</p>.<p>ರಾತ್ರಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ಗಾಬರಿಗೊಂಡ ಜನರು ಹೋಗಿ ನೋಡಿದಾಗ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಉರಿಯುತ್ತಿರುವುದು ಕಾಣಿಸಿದೆ. ಸ್ಫೋಟಕ್ಕೆ ಸ್ಪಷ್ಟ ಆಧಾರ ದೊರೆತಿಲ್ಲ. ಆದರೆ, ಹಿಂದೆ ಈ ಪ್ರದೇಶ ನಕ್ಸಲರ ಅಡಗುತಾಣವಾಗಿದ್ದು, ಮತ್ತೆ ಅವರ ಚಟುವಟಿಕೆಗಳು ಗರಿಗೆದರಿವೆಯೇ ಎಂಬ ಸಂಶಯ ಜನರಿಗೆ ಕಾಡುತ್ತಿದೆ.</p>.<p>‘ಹಲವು ತಿಂಗಳುಗಳಿಂದ ಗ್ರಾಮ ಪಂಚಾಯಿತಿಯಲ್ಲಿ ನಿವೇಶನದ ಖಾತೆ ವಿಚಾರವಾಗಿ ಅಧಿಕಾರಿಗಳು ಮತ್ತು ಬಲಾಢ್ಯರ ನಡುವೆ ಸಂಘರ್ಷ ನಡೆಯುತ್ತಿದೆ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಕಚೇರಿವರೆಗೆ ದೂರುಗಳು ಸಲ್ಲಿಕೆಯಾಗಿವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಕಚೇರಿಯಲ್ಲಿನ ದಾಖಲೆ ನಾಶ ಮಾಡಲು ಈ ರೀತಿ ಕೃತ್ಯ ನಡೆದಿರಬಹುದು’ ಎಂದು ಸ್ಥಳೀಯರಾದ ಗಂಗಣ್ಣ ಹೇಳಿದರು.</p>.<p><strong>ಯಾವುದೇ ಆಧಾರವಿಲ್ಲ</strong></p>.<p>ಗ್ರಾಮ ಪಂಚಾಯಿತಿಯಲ್ಲಿ ಸ್ಫೋಟ ನಡೆದಿರುವುದು ಸತ್ಯ. ಆದರೆ ಯಾವ ರೀತಿ ನಡೆಸಿದ್ದಾರೆ? ಏಕೆ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರ ದೊರೆತಿಲ್ಲ. ಸ್ಫೋಟ ನಡೆದ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ, ಪೌಡರ್ ಇನ್ನಿತರೆ ಯಾವುದೇ ಸ್ಫೋಟಕ ವಸ್ತುಗಳ ಚೂರುಗಳೂ ಕಂಡುಬಂದಿಲ್ಲ. ಕೇವಲ ಮೂರು-ನಾಲ್ಕು ಕುರ್ಚಿಗಳು ಸುಟ್ಟಿವೆ. ಗೋಡೆಗಳು ಒಡೆದಿವೆ. ತಜ್ಞರು ಬರಲಿದ್ದು, ಪರಿಶೀಲನೆ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ.</p>.<p>ಕಾಂತರೆಡ್ಡಿ, ಸಿಪಿಐ,ಪಾವಗಡ ಗ್ರಾಮಾಂತರ ವೃತ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈ.ಎನ್. ಹೊಸಕೋಟೆ (ಪಾವಗಡ ತಾಲ್ಲೂಕು):</strong> ಹೋಬಳಿಯ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಗೋಡೆಗಳು ಜಖಂಗೊಂಡಿವೆ.</p>.<p>ಕಚೇರಿಯ ಹಿಂಭಾಗದ ಕಿಟಕಿ ಯನ್ನು ಕಿತ್ತು ಒಳ ನುಸುಳಿರುವ ದುಷ್ಕ ರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸಭಾಂ ಗಣದ ಮೂಲೆಯಲ್ಲಿನ ಕುರ್ಚಿ ಮೇಲೆ ಸ್ಫೋಟ ನಡೆಸಿದಂತೆ ಕಂಡುಬಂದಿದ್ದು, ಕುರ್ಚಿಗಳು ಸುಟ್ಟು ಹೋಗಿವೆ.</p>.<p>ರಾತ್ರಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ಗಾಬರಿಗೊಂಡ ಜನರು ಹೋಗಿ ನೋಡಿದಾಗ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಉರಿಯುತ್ತಿರುವುದು ಕಾಣಿಸಿದೆ. ಸ್ಫೋಟಕ್ಕೆ ಸ್ಪಷ್ಟ ಆಧಾರ ದೊರೆತಿಲ್ಲ. ಆದರೆ, ಹಿಂದೆ ಈ ಪ್ರದೇಶ ನಕ್ಸಲರ ಅಡಗುತಾಣವಾಗಿದ್ದು, ಮತ್ತೆ ಅವರ ಚಟುವಟಿಕೆಗಳು ಗರಿಗೆದರಿವೆಯೇ ಎಂಬ ಸಂಶಯ ಜನರಿಗೆ ಕಾಡುತ್ತಿದೆ.</p>.<p>‘ಹಲವು ತಿಂಗಳುಗಳಿಂದ ಗ್ರಾಮ ಪಂಚಾಯಿತಿಯಲ್ಲಿ ನಿವೇಶನದ ಖಾತೆ ವಿಚಾರವಾಗಿ ಅಧಿಕಾರಿಗಳು ಮತ್ತು ಬಲಾಢ್ಯರ ನಡುವೆ ಸಂಘರ್ಷ ನಡೆಯುತ್ತಿದೆ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಕಚೇರಿವರೆಗೆ ದೂರುಗಳು ಸಲ್ಲಿಕೆಯಾಗಿವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಕಚೇರಿಯಲ್ಲಿನ ದಾಖಲೆ ನಾಶ ಮಾಡಲು ಈ ರೀತಿ ಕೃತ್ಯ ನಡೆದಿರಬಹುದು’ ಎಂದು ಸ್ಥಳೀಯರಾದ ಗಂಗಣ್ಣ ಹೇಳಿದರು.</p>.<p><strong>ಯಾವುದೇ ಆಧಾರವಿಲ್ಲ</strong></p>.<p>ಗ್ರಾಮ ಪಂಚಾಯಿತಿಯಲ್ಲಿ ಸ್ಫೋಟ ನಡೆದಿರುವುದು ಸತ್ಯ. ಆದರೆ ಯಾವ ರೀತಿ ನಡೆಸಿದ್ದಾರೆ? ಏಕೆ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರ ದೊರೆತಿಲ್ಲ. ಸ್ಫೋಟ ನಡೆದ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ, ಪೌಡರ್ ಇನ್ನಿತರೆ ಯಾವುದೇ ಸ್ಫೋಟಕ ವಸ್ತುಗಳ ಚೂರುಗಳೂ ಕಂಡುಬಂದಿಲ್ಲ. ಕೇವಲ ಮೂರು-ನಾಲ್ಕು ಕುರ್ಚಿಗಳು ಸುಟ್ಟಿವೆ. ಗೋಡೆಗಳು ಒಡೆದಿವೆ. ತಜ್ಞರು ಬರಲಿದ್ದು, ಪರಿಶೀಲನೆ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ.</p>.<p>ಕಾಂತರೆಡ್ಡಿ, ಸಿಪಿಐ,ಪಾವಗಡ ಗ್ರಾಮಾಂತರ ವೃತ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>