ಗುಬ್ಬಿ: ತಾಲ್ಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಧಗೆ ತಣಿಸಿಕೊಳ್ಳಲು ಸಹಕಾರಿಯಾಗುವಂತೆ ನಿಟ್ಟೂರಿನ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ‘ಜಲತ್ರಾಟಕಾಸನ’ ಹೇಳಿಕೊಡಲಾಗುತ್ತಿದೆ ಎಂದು ಯೋಗ ಶಿಕ್ಷಕ ಮಹಾವೀರ್ ತಿಳಿಸಿದರು.
ಬಿಸಿಲಿನ ತಾಪಕ್ಕೆ ತಲೆ, ಕಣ್ಣು, ಮುಖ, ಚರ್ಮ ರಕ್ಷಿಸಿಕೊಳ್ಳುವುದೇ ಸವಾಲಾಗುತ್ತಿದೆ. ಯೋಗದ ಮೂಲಕ ಶರೀರವನ್ನು ತಂಪುಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಯೋಗ ಹೇಳಿಕೊಡಲಾಗುತ್ತಿದೆ ಎಂದು ಹೇಳಿದರು.
ಪತಂಜಲಿ ಸಂಸ್ಥೆ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಸಂಸ್ಥೆಯು ಆಸಕ್ತರಿಗೆ ಉಚಿತವಾಗಿ ಯೋಗ ತರಗತಿ ನಡೆಸಲು ಕ್ರಿಯಾ ಯೋಜನೆ ರೂಪಿಸುತ್ತಿದೆ. ತಾಪಮಾನ ಹೆಚ್ಚಾದಂತೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ನಿಯಮಿತ ಯೋಗಾಭ್ಯಾಸದಿಂದ ಅನುಕೂಲವಾಗುವುದು ಎಂದು ಹೇಳಿದರು.