<p><strong>ಕುಣಿಗಲ್:</strong> ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆವರಣ ಗೋಡೆ ಇಲ್ಲದೆ ಬೆಳಿಗ್ಗೆ ನೈತಿಕ ಶಿಕ್ಷಣದ ಕೇಂದ್ರ ಬಿಂದುವಾಗಿರುವ ಕಚೇರಿ, ಸಂಜೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಯಾವುದೇ ಪ್ರತ್ಯೇಕ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಾಲಕರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಕೊಠಡಿಯಲ್ಲೇ ಬಿಇಒ ಕಚೇರಿ ಕಾರ್ಯಾಚರಿಸುತ್ತಿದೆ.<br /> <br /> ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಈ ಭಾಗದ ಪ್ರದೇಶದಲ್ಲಿದ್ದ ಆಟದ ಮೈದಾನವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಗೆ ನೀಡಲಾಗಿದೆ. ಒಂದು ಪಾರ್ಶ್ವದಲ್ಲಿ ಶಿಕ್ಷಕ ಭವನ ನಿರ್ಮಾಣವಾಗಿದ್ದು, ಅದೂ ಶೈವಾವಸ್ಥೆಯಲ್ಲಿದೆ. ಪಕ್ಕದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಕ ಸಂಯೋಜಕರ ಕಚೇರಿ.<br /> <br /> ಬಯಲು ರಂಗಮಂದಿರದ ಜೊತೆ ಕುಡಿಯುವ ನೀರು ಸರಬರಾಜಿನ ತೊಟ್ಟಿ ನಿರ್ಮಿಸಲಾಗಿದೆ. ಇಷ್ಟೆಲ್ಲ ಜಾಗ ಆವರಿಸಿಕೊಂಡಿರುವ ಈ ಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ್ದ ಆವರಣಗೋಡೆ ಸಂಪೂರ್ಣ ಶಿಥಿಲವಾಗಿದ್ದು, ಕೆಲವೆಡೆ ಬಿದ್ದು ಹೋಗಿದೆ.<br /> <br /> ಪ್ರಸಕ್ತ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಗೋಬಿ ಮಂಚೂರಿ, ಪಾನಿಪುರಿ, ಕಬಾಬ್, ಬಿರಿಯಾನಿ, ಸಂಚಾರಿ ಚಾಟ್ಸ್ ಸೆಂಟರ್ ಗಾಡಿಗಳು ತಮ್ಮ ಜಾಗವನ್ನು ಶಿಥಿಲವಾಗಿರುವ ಬಿಇಒ ಕಚೇರಿ ಆವರಣ ಗೋಡೆ ಪಕ್ಕಕ್ಕೆ ವರ್ಗಾಯಿಸಿಕೊಂಡಿವೆ.<br /> <br /> ಈ ಬೆಳವಣಿಗೆಯಿಂದ ಹಗಲು ಸರ್ಕಾರಿ ಕೆಲಸ ನಡೆದರೆ ಸಂಜೆ ವೇಳೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಿಇಒ ಕಚೇರಿ ಆವರಣ, ರಂಗಮಂದಿರ, ಕ್ರೀಡಾಂಗಣ ಗುಂಡು-ತುಂಡಿನ ಪಾರ್ಟಿ ಮಾಡುವವರ ತಾಣ ಹಾಗೂ ಬಯಲು ಶೌಚಾಲಯವಾಗಿ ಪರಿಣಮಿಸಿದೆ. ಇವರನ್ನು ಹತ್ತಿಕ್ಕಲು ಪೊಲೀಸ್ ಅಧಿಕಾರಿಗಳು ಆಗಿಂದಾಗ್ಗೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದರೂ; ನಿಯಂತ್ರಣಕ್ಕೆ ಬಂದಿಲ್ಲ ಎಂದು ರಮೇಶ್, ಜಯಪ್ರಕಾಶ್, ರಾಮಕೃಷ್ಣಪ್ಪ, ನಾರಾಯಣಗೌಡ, ರವಿ, ಮಂಜುನಾಥ್ ಆರೋಪಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆವರಣ ಗೋಡೆ ಇಲ್ಲದೆ ಬೆಳಿಗ್ಗೆ ನೈತಿಕ ಶಿಕ್ಷಣದ ಕೇಂದ್ರ ಬಿಂದುವಾಗಿರುವ ಕಚೇರಿ, ಸಂಜೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಯಾವುದೇ ಪ್ರತ್ಯೇಕ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಾಲಕರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಕೊಠಡಿಯಲ್ಲೇ ಬಿಇಒ ಕಚೇರಿ ಕಾರ್ಯಾಚರಿಸುತ್ತಿದೆ.<br /> <br /> ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಈ ಭಾಗದ ಪ್ರದೇಶದಲ್ಲಿದ್ದ ಆಟದ ಮೈದಾನವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಗೆ ನೀಡಲಾಗಿದೆ. ಒಂದು ಪಾರ್ಶ್ವದಲ್ಲಿ ಶಿಕ್ಷಕ ಭವನ ನಿರ್ಮಾಣವಾಗಿದ್ದು, ಅದೂ ಶೈವಾವಸ್ಥೆಯಲ್ಲಿದೆ. ಪಕ್ಕದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಕ ಸಂಯೋಜಕರ ಕಚೇರಿ.<br /> <br /> ಬಯಲು ರಂಗಮಂದಿರದ ಜೊತೆ ಕುಡಿಯುವ ನೀರು ಸರಬರಾಜಿನ ತೊಟ್ಟಿ ನಿರ್ಮಿಸಲಾಗಿದೆ. ಇಷ್ಟೆಲ್ಲ ಜಾಗ ಆವರಿಸಿಕೊಂಡಿರುವ ಈ ಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ್ದ ಆವರಣಗೋಡೆ ಸಂಪೂರ್ಣ ಶಿಥಿಲವಾಗಿದ್ದು, ಕೆಲವೆಡೆ ಬಿದ್ದು ಹೋಗಿದೆ.<br /> <br /> ಪ್ರಸಕ್ತ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಗೋಬಿ ಮಂಚೂರಿ, ಪಾನಿಪುರಿ, ಕಬಾಬ್, ಬಿರಿಯಾನಿ, ಸಂಚಾರಿ ಚಾಟ್ಸ್ ಸೆಂಟರ್ ಗಾಡಿಗಳು ತಮ್ಮ ಜಾಗವನ್ನು ಶಿಥಿಲವಾಗಿರುವ ಬಿಇಒ ಕಚೇರಿ ಆವರಣ ಗೋಡೆ ಪಕ್ಕಕ್ಕೆ ವರ್ಗಾಯಿಸಿಕೊಂಡಿವೆ.<br /> <br /> ಈ ಬೆಳವಣಿಗೆಯಿಂದ ಹಗಲು ಸರ್ಕಾರಿ ಕೆಲಸ ನಡೆದರೆ ಸಂಜೆ ವೇಳೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಿಇಒ ಕಚೇರಿ ಆವರಣ, ರಂಗಮಂದಿರ, ಕ್ರೀಡಾಂಗಣ ಗುಂಡು-ತುಂಡಿನ ಪಾರ್ಟಿ ಮಾಡುವವರ ತಾಣ ಹಾಗೂ ಬಯಲು ಶೌಚಾಲಯವಾಗಿ ಪರಿಣಮಿಸಿದೆ. ಇವರನ್ನು ಹತ್ತಿಕ್ಕಲು ಪೊಲೀಸ್ ಅಧಿಕಾರಿಗಳು ಆಗಿಂದಾಗ್ಗೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದರೂ; ನಿಯಂತ್ರಣಕ್ಕೆ ಬಂದಿಲ್ಲ ಎಂದು ರಮೇಶ್, ಜಯಪ್ರಕಾಶ್, ರಾಮಕೃಷ್ಣಪ್ಪ, ನಾರಾಯಣಗೌಡ, ರವಿ, ಮಂಜುನಾಥ್ ಆರೋಪಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>