<p>ಕುಣಿಗಲ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್ ಸೋಲಿಗೆ ನಾನೇ ಕಾರಣ ಎಂದು ಬಿಜೆಪಿ ಮುಖಂಡ, ಶಾಸಕ ಆರ್.ಅಶೋಕ್ ತಿಳಿಸಿದರು.<br /> <br /> ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಕುಮಾರ್, ‘ನನ್ನ ಸೋಲಿಗೆ ಅಶೋಕ್ ಕಾರಣ’ ಎಂದು ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ, ‘ನನ್ನಿಂದ ತಪ್ಪಾಗಿದೆ’ ಎಂದರು.<br /> <br /> ಕೃಷ್ಣಕುಮಾರ್ ತೀವ್ರ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಾಗಿದ್ದರೆ ನಾನು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದ ಅಶೋಕ್, ಈಗ ನನ್ನ ಶಿಷ್ಯನನ್ನು ಗೆಲ್ಲಿಸಿ. ನಿಮ್ಮನ್ನು ಶಾಸಕರನ್ನಾಗಿ ನಾವು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.<br /> <br /> ಚಿತ್ರ ನಟಿ ರಕ್ಷಿತಾ ಮಾತನಾಡಿ ಯುಪಿಎ ಸರ್ಕಾರದಲ್ಲಿ ಮಹಿಳೆಯರಿಗೆ ಮೀಸಲಾತಿ, ರಕ್ಷಣೆ ದೊರೆಯಲಿಲ್ಲ ಎಂದರು.<br /> ಅಭ್ಯರ್ಥಿ ಮುನಿರಾಜು ಮಾತನಾಡಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಸಚಿವ, ಸಂಸದರ ದರ್ಪಕ್ಕೆ ಇತಿಶ್ರೀ ಹಾಕುವ ವಿಷಯದೊಂದಿಗೆ ಮತ ಕೇಳುತ್ತಿದ್ದೇನೆ ಎಂದರು.<br /> <br /> ಮಾಜಿ ಸಚಿವ ರಾಮಚಂದ್ರೇಗೌಡ, ಮುಖಂಡರಾದ ಡಿ.ಕೃಷ್ಣ ಕುಮಾರ್, ಚಿಕ್ಕರಾಮಣ್ಣ, ನಾರಾಯಣ ಗೌಡ, ಕೃಷ್ಣರೆಡ್ಡಿ, ಇಸ್ಮಾಯಿಲ್, ಕೆ.ಎಂ.ತಿಮ್ಮಪ್ಪ, ಅರುಣ್ಕುಮಾರ್, ಶಶಿಕಲಾ, ಪದ್ಮಾ, ರಂಗಸ್ವಾಮಿ, ಎಸ್ಟಿಡಿ ಶ್ರೀನಿವಾಸ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಣಿಗಲ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್ ಸೋಲಿಗೆ ನಾನೇ ಕಾರಣ ಎಂದು ಬಿಜೆಪಿ ಮುಖಂಡ, ಶಾಸಕ ಆರ್.ಅಶೋಕ್ ತಿಳಿಸಿದರು.<br /> <br /> ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಕುಮಾರ್, ‘ನನ್ನ ಸೋಲಿಗೆ ಅಶೋಕ್ ಕಾರಣ’ ಎಂದು ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ, ‘ನನ್ನಿಂದ ತಪ್ಪಾಗಿದೆ’ ಎಂದರು.<br /> <br /> ಕೃಷ್ಣಕುಮಾರ್ ತೀವ್ರ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಾಗಿದ್ದರೆ ನಾನು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದ ಅಶೋಕ್, ಈಗ ನನ್ನ ಶಿಷ್ಯನನ್ನು ಗೆಲ್ಲಿಸಿ. ನಿಮ್ಮನ್ನು ಶಾಸಕರನ್ನಾಗಿ ನಾವು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.<br /> <br /> ಚಿತ್ರ ನಟಿ ರಕ್ಷಿತಾ ಮಾತನಾಡಿ ಯುಪಿಎ ಸರ್ಕಾರದಲ್ಲಿ ಮಹಿಳೆಯರಿಗೆ ಮೀಸಲಾತಿ, ರಕ್ಷಣೆ ದೊರೆಯಲಿಲ್ಲ ಎಂದರು.<br /> ಅಭ್ಯರ್ಥಿ ಮುನಿರಾಜು ಮಾತನಾಡಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಸಚಿವ, ಸಂಸದರ ದರ್ಪಕ್ಕೆ ಇತಿಶ್ರೀ ಹಾಕುವ ವಿಷಯದೊಂದಿಗೆ ಮತ ಕೇಳುತ್ತಿದ್ದೇನೆ ಎಂದರು.<br /> <br /> ಮಾಜಿ ಸಚಿವ ರಾಮಚಂದ್ರೇಗೌಡ, ಮುಖಂಡರಾದ ಡಿ.ಕೃಷ್ಣ ಕುಮಾರ್, ಚಿಕ್ಕರಾಮಣ್ಣ, ನಾರಾಯಣ ಗೌಡ, ಕೃಷ್ಣರೆಡ್ಡಿ, ಇಸ್ಮಾಯಿಲ್, ಕೆ.ಎಂ.ತಿಮ್ಮಪ್ಪ, ಅರುಣ್ಕುಮಾರ್, ಶಶಿಕಲಾ, ಪದ್ಮಾ, ರಂಗಸ್ವಾಮಿ, ಎಸ್ಟಿಡಿ ಶ್ರೀನಿವಾಸ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>