<p>ತುಮಕೂರು: ನಗರದ ನೃಸಿಂಹ ಕಲಾಮಂದಿರದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಹಿತ್ಯ-ಸಂಗೀತ-ನೃತ್ಯೋತ್ಸವದಲ್ಲಿ ಜಗ್ಗು ಶಿಂಗ್ರೆ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿಯನ್ನು ಮೇಲುಕೋಟೆಯ ಸಂಸ್ಕೃತ ವಿದ್ವಾಂಸ ಅರೈಯರ್ ಶ್ರೀರಾಮಶರ್ಮ, ಸಾಹಿತಿ ಕವಿತಾಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.<br /> <br /> ಜಗ್ಗು ಶಿಂಗ್ರೆ ಅಯ್ಯಂಗಾರ್ ಕುರಿತ ಬೆಳ್ಳಿಯ ಬಳ್ಳಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಗಾನವಾರಿಧಿ ನೃತ್ಯ ಕಲಾ ಶಾಲೆಯ ಪ್ರಾಂಶುಪಾಲರಾದ ರಂಜನಿ ಜಯಸಿಂಹ ಅವರನ್ನು ಸನ್ಮಾನಿಸಲಾಯಿತು. <br /> <br /> ಜೂನಿಯರ್ ವಾದ್ಯ ಸಂಗೀತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನೃಸಿಂಹ ಕಲಾಮಂದಿರದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಜಗ್ಗು ಪ್ರಿಯದರ್ಶಿನಿ ಪುರಸ್ಕಾರ ನೀಡಲಾಯಿತು.<br /> <br /> ಕಾರ್ಯಕ್ರಮವನ್ನು ಯೋಗತಜ್ಞ ಎಂ.ಕೆ. ನಾಗರಾಜರಾವ್ ಉದ್ಘಾಟಿಸಿದರು. ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಕೆ.ಪಿ.ಮಹೇಶ್, ಸಂಸ್ಕೃತ ಉಪನ್ಯಾಸಕಿ ಡಾ.ಟಿ.ರಮಾ ಅತಿಥಿಗಳಾಗಿದ್ದರು. ಕಲಾಮಂದಿರದ ಸಂಸ್ಥಾಪಕಿ ರುಕ್ಮಿಣಿ ಗೋಪಾಲ್ ಸ್ವಾಗತಿಸಿದರು. <br /> <br /> ನಂತರ ರುಕ್ಮಿಣಿ ಗೋಪಾಲ್ ಅವರ ತಂಡದಿಂದ ಪಂಚವೀಣಾ ವಾದನ, ದೂರದರ್ಶನ ಕಲಾವಿದೆಯರಾದ ಎಂ.ಎ.ಮೀರಾ ಮತ್ತು ಎಂ.ಎ.ಮೈಥಿಲಿ ಅವರ ಸಂಗೀತ ಕಛೇರಿ, ರಂಜಿನಿ ಜಯಸಿಂಹ ಅವರ ನೇತೃತ್ವದಲ್ಲಿ ಭರತನಾಟ್ಯ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ನಗರದ ನೃಸಿಂಹ ಕಲಾಮಂದಿರದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಹಿತ್ಯ-ಸಂಗೀತ-ನೃತ್ಯೋತ್ಸವದಲ್ಲಿ ಜಗ್ಗು ಶಿಂಗ್ರೆ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿಯನ್ನು ಮೇಲುಕೋಟೆಯ ಸಂಸ್ಕೃತ ವಿದ್ವಾಂಸ ಅರೈಯರ್ ಶ್ರೀರಾಮಶರ್ಮ, ಸಾಹಿತಿ ಕವಿತಾಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.<br /> <br /> ಜಗ್ಗು ಶಿಂಗ್ರೆ ಅಯ್ಯಂಗಾರ್ ಕುರಿತ ಬೆಳ್ಳಿಯ ಬಳ್ಳಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಗಾನವಾರಿಧಿ ನೃತ್ಯ ಕಲಾ ಶಾಲೆಯ ಪ್ರಾಂಶುಪಾಲರಾದ ರಂಜನಿ ಜಯಸಿಂಹ ಅವರನ್ನು ಸನ್ಮಾನಿಸಲಾಯಿತು. <br /> <br /> ಜೂನಿಯರ್ ವಾದ್ಯ ಸಂಗೀತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನೃಸಿಂಹ ಕಲಾಮಂದಿರದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಜಗ್ಗು ಪ್ರಿಯದರ್ಶಿನಿ ಪುರಸ್ಕಾರ ನೀಡಲಾಯಿತು.<br /> <br /> ಕಾರ್ಯಕ್ರಮವನ್ನು ಯೋಗತಜ್ಞ ಎಂ.ಕೆ. ನಾಗರಾಜರಾವ್ ಉದ್ಘಾಟಿಸಿದರು. ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಕೆ.ಪಿ.ಮಹೇಶ್, ಸಂಸ್ಕೃತ ಉಪನ್ಯಾಸಕಿ ಡಾ.ಟಿ.ರಮಾ ಅತಿಥಿಗಳಾಗಿದ್ದರು. ಕಲಾಮಂದಿರದ ಸಂಸ್ಥಾಪಕಿ ರುಕ್ಮಿಣಿ ಗೋಪಾಲ್ ಸ್ವಾಗತಿಸಿದರು. <br /> <br /> ನಂತರ ರುಕ್ಮಿಣಿ ಗೋಪಾಲ್ ಅವರ ತಂಡದಿಂದ ಪಂಚವೀಣಾ ವಾದನ, ದೂರದರ್ಶನ ಕಲಾವಿದೆಯರಾದ ಎಂ.ಎ.ಮೀರಾ ಮತ್ತು ಎಂ.ಎ.ಮೈಥಿಲಿ ಅವರ ಸಂಗೀತ ಕಛೇರಿ, ರಂಜಿನಿ ಜಯಸಿಂಹ ಅವರ ನೇತೃತ್ವದಲ್ಲಿ ಭರತನಾಟ್ಯ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>