<p><strong>ತಿಪಟೂರು:</strong> ನಗರದ ಎಪಿಎಂಸಿ ಪಕ್ಕದ ಕೆಂಪಮ್ಮ ಬಡಾವಣೆಯಲ್ಲಿದ್ದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಜಾಗ ತಮ್ಮದೆಂದು ಹೇಳಿಕೊಂಡವರು ಶುಕ್ರವಾರ ತೆರವುಗೊಳಿಸಲು ಪ್ರಯತ್ನಿಸಿದ್ದರಿಂದ ವಿವಾದ, ವಾಗ್ವಾದಕ್ಕೆ ಕಾರಣವಾಯಿತು.<br /> <br /> ಹತ್ತು ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಆಕಸ್ಮಿಕವಾಗಿ ಕೋತಿಯೊಂದು ಮೃತಪಟ್ಟಿತ್ತು. ಆಸಕ್ತರು ಸೇರಿ ಬಡಾವಣೆಗೆ ಹೊಂದಿಕೊಂಡ ಖಾಲಿ ಜಮೀನಿನಲ್ಲಿ ಅದರ ಅಂತ್ಯ ಸಂಸ್ಕಾರ ಮಾಡಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದೇ ಜಾಗದಲ್ಲಿ ಆಂಜನೇಯ ಸ್ವಾಮೀಯ ಪುಟ್ಟ ದೇವಾಲಯವೊಂದನ್ನು ನಿರ್ಮಿಸಿದ್ದರು. ಆ ಜಾಗ ಯಾರಿಗೆ ಸೇರಿದ್ದೆಂದು ಯಾರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ.<br /> <br /> ಈಚೆಗೆ ತಾಲ್ಲೂಕಿನ ಸೂಗೂರಿನ ವ್ಯಕ್ತಿಯೊಬ್ಬರು ಬಂದು ಈ ಜಮೀನು ತಮ್ಮ ಕುಟುಂಬಕ್ಕೆ ಸೇರಿದ್ದೆಂದು ಹೇಳಿಕೊಂಡಿದ್ದರು. ಇಲ್ಲಿ ಲೇಔಟ್ ಮಾಡುವ ಉದ್ದೇಶ ಇದೆ. ದೇವಸ್ಥಾನ ಮಧ್ಯದಲ್ಲಿರುವುದರಿಂದ ನಿವೇಶನ ಮತ್ತು ರಸ್ತೆ ವಿಂಗಡಣೆಗೆ ತೊಡಕಾಗುತ್ತದೆ.<br /> <br /> ತಮ್ಮ ಜಮೀನಲ್ಲಿಯೇ ಬದಲಿ ಜಾಗದಲ್ಲಿ ದೇಗುಲ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸುತ್ತೇವೆ. ನಂತರ ಹಾಲಿ ದೇವಸ್ಥಾನ ತೆರೆವುಗೊಳಿಸುತ್ತೇವೆ ಎಂದು ಆ ವ್ಯಕ್ತಿ ಭರವಸೆ ನೀಡುವ ಮೂಲಕ ಸ್ಥಳೀಯರಿಂದ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.<br /> <br /> ಆದರೆ ಅವರು ಶುಕ್ರವಾರ ಏಕಾಏಕಿ ಜೆಸಿಬಿ ತಂದು ದೇಗುಲವನ್ನು ಹಿಂಬದಿಯಿಂದ ಕೆಡವಲು ಮುಂದಾದರು. ನಿವೇಶನ ಮಾಲೀಕರೆಂದು ಹೇಳಿಕೊಂಡ ಆ ವ್ಯಕ್ತಿ ಗುರುವಾರವೇ ಮೂರ್ತಿಯನ್ನು ಗುಟ್ಟಾಗಿ ಕಿತ್ತು ಸಮೀಪದ ಅರಳಿ ಮರದ ಕೆಳಗೆ ಇಟ್ಟಿದ್ದರು ಎಂದು ದೂರಿದ ಸ್ಥಳೀಯರು ದೇಗುಲ ತೆರವುಗೊಳಿಸುವುದನ್ನು ವಿರೋಧಿಸಿದರು. ಅಷ್ಟರಲ್ಲಾಗಲೇ ಅರ್ಧ ದೇಗುಲ ಕೆಡವಿದ್ದ ಜೆಸಿಬಿ ವಾಪಸ್ ಹೋಯಿತು. ಜನ ಗುಂಪು ಗೂಡಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿದರು.<br /> <br /> ನಿವೇಶನದ ಮಾಲೀಕರೆನ್ನಲಾದ ವ್ಯಕ್ತಿ ಕರೆಸಿ ಜನರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಎಪಿಎಂಸಿ ಅರಳಿ ಮರದ ಕೆಳಗಿದ್ದ ಆಂಜನೇಯ ಮೂರ್ತಿಯನ್ನು ಸ್ಥಳೀಯರು ಆಟೊದಲ್ಲಿ ತಂದು ಮತ್ತೆ ಅರ್ಧ ಕೆಡವಿದ ದೇಗುಲದಲ್ಲೇ ಇಟ್ಟು ಪೂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ನಗರದ ಎಪಿಎಂಸಿ ಪಕ್ಕದ ಕೆಂಪಮ್ಮ ಬಡಾವಣೆಯಲ್ಲಿದ್ದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಜಾಗ ತಮ್ಮದೆಂದು ಹೇಳಿಕೊಂಡವರು ಶುಕ್ರವಾರ ತೆರವುಗೊಳಿಸಲು ಪ್ರಯತ್ನಿಸಿದ್ದರಿಂದ ವಿವಾದ, ವಾಗ್ವಾದಕ್ಕೆ ಕಾರಣವಾಯಿತು.<br /> <br /> ಹತ್ತು ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಆಕಸ್ಮಿಕವಾಗಿ ಕೋತಿಯೊಂದು ಮೃತಪಟ್ಟಿತ್ತು. ಆಸಕ್ತರು ಸೇರಿ ಬಡಾವಣೆಗೆ ಹೊಂದಿಕೊಂಡ ಖಾಲಿ ಜಮೀನಿನಲ್ಲಿ ಅದರ ಅಂತ್ಯ ಸಂಸ್ಕಾರ ಮಾಡಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದೇ ಜಾಗದಲ್ಲಿ ಆಂಜನೇಯ ಸ್ವಾಮೀಯ ಪುಟ್ಟ ದೇವಾಲಯವೊಂದನ್ನು ನಿರ್ಮಿಸಿದ್ದರು. ಆ ಜಾಗ ಯಾರಿಗೆ ಸೇರಿದ್ದೆಂದು ಯಾರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ.<br /> <br /> ಈಚೆಗೆ ತಾಲ್ಲೂಕಿನ ಸೂಗೂರಿನ ವ್ಯಕ್ತಿಯೊಬ್ಬರು ಬಂದು ಈ ಜಮೀನು ತಮ್ಮ ಕುಟುಂಬಕ್ಕೆ ಸೇರಿದ್ದೆಂದು ಹೇಳಿಕೊಂಡಿದ್ದರು. ಇಲ್ಲಿ ಲೇಔಟ್ ಮಾಡುವ ಉದ್ದೇಶ ಇದೆ. ದೇವಸ್ಥಾನ ಮಧ್ಯದಲ್ಲಿರುವುದರಿಂದ ನಿವೇಶನ ಮತ್ತು ರಸ್ತೆ ವಿಂಗಡಣೆಗೆ ತೊಡಕಾಗುತ್ತದೆ.<br /> <br /> ತಮ್ಮ ಜಮೀನಲ್ಲಿಯೇ ಬದಲಿ ಜಾಗದಲ್ಲಿ ದೇಗುಲ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸುತ್ತೇವೆ. ನಂತರ ಹಾಲಿ ದೇವಸ್ಥಾನ ತೆರೆವುಗೊಳಿಸುತ್ತೇವೆ ಎಂದು ಆ ವ್ಯಕ್ತಿ ಭರವಸೆ ನೀಡುವ ಮೂಲಕ ಸ್ಥಳೀಯರಿಂದ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.<br /> <br /> ಆದರೆ ಅವರು ಶುಕ್ರವಾರ ಏಕಾಏಕಿ ಜೆಸಿಬಿ ತಂದು ದೇಗುಲವನ್ನು ಹಿಂಬದಿಯಿಂದ ಕೆಡವಲು ಮುಂದಾದರು. ನಿವೇಶನ ಮಾಲೀಕರೆಂದು ಹೇಳಿಕೊಂಡ ಆ ವ್ಯಕ್ತಿ ಗುರುವಾರವೇ ಮೂರ್ತಿಯನ್ನು ಗುಟ್ಟಾಗಿ ಕಿತ್ತು ಸಮೀಪದ ಅರಳಿ ಮರದ ಕೆಳಗೆ ಇಟ್ಟಿದ್ದರು ಎಂದು ದೂರಿದ ಸ್ಥಳೀಯರು ದೇಗುಲ ತೆರವುಗೊಳಿಸುವುದನ್ನು ವಿರೋಧಿಸಿದರು. ಅಷ್ಟರಲ್ಲಾಗಲೇ ಅರ್ಧ ದೇಗುಲ ಕೆಡವಿದ್ದ ಜೆಸಿಬಿ ವಾಪಸ್ ಹೋಯಿತು. ಜನ ಗುಂಪು ಗೂಡಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿದರು.<br /> <br /> ನಿವೇಶನದ ಮಾಲೀಕರೆನ್ನಲಾದ ವ್ಯಕ್ತಿ ಕರೆಸಿ ಜನರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಎಪಿಎಂಸಿ ಅರಳಿ ಮರದ ಕೆಳಗಿದ್ದ ಆಂಜನೇಯ ಮೂರ್ತಿಯನ್ನು ಸ್ಥಳೀಯರು ಆಟೊದಲ್ಲಿ ತಂದು ಮತ್ತೆ ಅರ್ಧ ಕೆಡವಿದ ದೇಗುಲದಲ್ಲೇ ಇಟ್ಟು ಪೂಜಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>