<p>ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳ ಜಾತಿ ನಮೂದು ಮಾಡಿರುವ ಪರೀಕ್ಷಾ ಮಂಡಳಿ ಕ್ರಮವನ್ನು ಪಿಯು ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಖಂಡಿಸಿದ್ದಾರೆ.<br /> <br /> ಇದೇ ಮೊದಲ ಸಲ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸಲಾಗಿದೆ. ಇದು ಕೆಟ್ಟ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.<br /> <br /> ಪರೀಕ್ಷೆ ಬರೆಯುವ ವಿದ್ಯಾರ್ಥಿ ಗುರುತಿಸಲು ಪ್ರವೇಶ ಪತ್ರದೊಂದಿಗೆ ವಿದ್ಯಾರ್ಥಿಯ ಫೋಟೊ ಇರುತ್ತದೆ. ಜತೆಗೆ ಸಹಿ ಕೂಡ ಇರುತ್ತದೆ. ಆದರೆ ಜಾತಿ ನಮೂದು ಮಾಡುವುದರಿಂದ ಪರೀಕ್ಷಾ ವ್ಯವಸ್ಥೆ ಭ್ರಷ್ಟಗೊಳ್ಳುವ ಅಪಾಯವಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.|<br /> <br /> ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಅವರನ್ನು ಜಾತಿ ಕಣ್ಣಿನಿಂದ ಗುರುತಿಸುವ ಅಪಾಯವಿದೆ. ಅಗಾಧ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ. <br /> <br /> ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಂಭವ ಹೆಚ್ಚಾಗುತ್ತದೆ. ಅಲ್ಲದೆ ಜಾತಿ ಎಂಬುದು ಪ್ರೀತಿ ಮತ್ತು ಈರ್ಷ್ಯೆ ಎರಡಕ್ಕೂ ಕಾರಣವಾಗುತ್ತದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತದೆ ಎಂದಿದ್ದಾರೆ.<br /> <br /> ಜಾಗೃತ ದಳ ಉಪನ್ಯಾಸಕರು ಪರೀಕ್ಷಾ ತಪಾಸಣೆಗೆ ಬಂದಾಗ ವಿದ್ಯಾರ್ಥಿ ಜಾತಿ ಗಮನಿಸಿ ಆತನ ತಪಾಸಣೆಗೊಳಪಡಿಸುವ, ನೋಡುವ ವಿಧಾನವೇ ಬದಲಾಗುವ ಸಂಭವವಿದೆ. ಸರ್ಕಾರ ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.<br /> <br /> <br /> <strong>ಎಚ್ಎಂಎಸ್ನಲ್ಲಿ ಉದ್ಯೋಗ ಮೇಳ ನಾಳೆ</strong><br /> ತುಮಕೂರು: ಮಂಚಕಲ್ ಕುಪ್ಪೆಯಲ್ಲಿರುವ ಎಚ್ಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಉತ್ತೀರ್ಣರಾದ (2010-11) ವಿದ್ಯಾರ್ಥಿಗಳಿಗೆ ಮಾರ್ಚ್ 7ರಂದು ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳ ಏರ್ಪಡಿಸಿದೆ.<br /> <br /> ಐಬಿಎಂ ಕಂಪೆನಿ ಸಂದರ್ಶನ ನಡೆಸಲಿದೆ. ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಇ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿವರಕ್ಕೆ ಉದ್ಯೋಗಾಧಿಕಾರಿ ಟಿ.ಎಸ್.ರಮೇಶ್ ಮೊ 9900570991 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳ ಜಾತಿ ನಮೂದು ಮಾಡಿರುವ ಪರೀಕ್ಷಾ ಮಂಡಳಿ ಕ್ರಮವನ್ನು ಪಿಯು ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಕೆ.ದೊರೈರಾಜ್ ಖಂಡಿಸಿದ್ದಾರೆ.<br /> <br /> ಇದೇ ಮೊದಲ ಸಲ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಜಾತಿ ನಮೂದಿಸಲಾಗಿದೆ. ಇದು ಕೆಟ್ಟ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.<br /> <br /> ಪರೀಕ್ಷೆ ಬರೆಯುವ ವಿದ್ಯಾರ್ಥಿ ಗುರುತಿಸಲು ಪ್ರವೇಶ ಪತ್ರದೊಂದಿಗೆ ವಿದ್ಯಾರ್ಥಿಯ ಫೋಟೊ ಇರುತ್ತದೆ. ಜತೆಗೆ ಸಹಿ ಕೂಡ ಇರುತ್ತದೆ. ಆದರೆ ಜಾತಿ ನಮೂದು ಮಾಡುವುದರಿಂದ ಪರೀಕ್ಷಾ ವ್ಯವಸ್ಥೆ ಭ್ರಷ್ಟಗೊಳ್ಳುವ ಅಪಾಯವಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.|<br /> <br /> ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಅವರನ್ನು ಜಾತಿ ಕಣ್ಣಿನಿಂದ ಗುರುತಿಸುವ ಅಪಾಯವಿದೆ. ಅಗಾಧ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ. <br /> <br /> ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಂಭವ ಹೆಚ್ಚಾಗುತ್ತದೆ. ಅಲ್ಲದೆ ಜಾತಿ ಎಂಬುದು ಪ್ರೀತಿ ಮತ್ತು ಈರ್ಷ್ಯೆ ಎರಡಕ್ಕೂ ಕಾರಣವಾಗುತ್ತದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತದೆ ಎಂದಿದ್ದಾರೆ.<br /> <br /> ಜಾಗೃತ ದಳ ಉಪನ್ಯಾಸಕರು ಪರೀಕ್ಷಾ ತಪಾಸಣೆಗೆ ಬಂದಾಗ ವಿದ್ಯಾರ್ಥಿ ಜಾತಿ ಗಮನಿಸಿ ಆತನ ತಪಾಸಣೆಗೊಳಪಡಿಸುವ, ನೋಡುವ ವಿಧಾನವೇ ಬದಲಾಗುವ ಸಂಭವವಿದೆ. ಸರ್ಕಾರ ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.<br /> <br /> <br /> <strong>ಎಚ್ಎಂಎಸ್ನಲ್ಲಿ ಉದ್ಯೋಗ ಮೇಳ ನಾಳೆ</strong><br /> ತುಮಕೂರು: ಮಂಚಕಲ್ ಕುಪ್ಪೆಯಲ್ಲಿರುವ ಎಚ್ಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಉತ್ತೀರ್ಣರಾದ (2010-11) ವಿದ್ಯಾರ್ಥಿಗಳಿಗೆ ಮಾರ್ಚ್ 7ರಂದು ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳ ಏರ್ಪಡಿಸಿದೆ.<br /> <br /> ಐಬಿಎಂ ಕಂಪೆನಿ ಸಂದರ್ಶನ ನಡೆಸಲಿದೆ. ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಇ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿವರಕ್ಕೆ ಉದ್ಯೋಗಾಧಿಕಾರಿ ಟಿ.ಎಸ್.ರಮೇಶ್ ಮೊ 9900570991 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>