<p><strong>ತಿಪಟೂರು:</strong> ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಡೀ ವ್ಯಾಪಕ ಮಳೆ ಆಯಿತು. ಕಸಬಾದಲ್ಲಿ ಗರಿಷ್ಠ 62.5 ಮಿಮೀ ದಾಖಲಾಗಿದೆ.<br /> <br /> ಸಂಜೆ ಗುಡುಗು ಸಹಿತ ಆರಂಭವಾದ ಮಳೆ ಜನತೆಗೆ ತಂಪೆರೆಯಿತು. ಯಾವುದೇ ಹಾನಿಯಾದ ವರದಿಯಾಗಿಲ್ಲ. ಏಪ್ರಿಲ್ನಲ್ಲಿ ವಾಡಿಕೆ ಮಳೆ ಪ್ರಮಾಣ 30 ಮಿಮೀ ಆಗಿತ್ತು. ಆದರೆ ಈಗಾಗಲೇ ಸರಾಸರಿ 35 ಮಿಮೀ ದಾಖಲಾಗಿದೆ. ವಾಡಿಕೆಗಿಂತ ದುಪ್ಪಟ್ಟು ಮಳೆ ಬಿದ್ದಂತಾಗಿದೆ ಎನ್ನಲಾಗಿದೆ. ಕಸಬಾ-62.5 ಮಿಮೀ, ಹೊನ್ನವಳ್ಳಿ-5.2, ಕಿಬ್ಬನಹಳ್ಳಿ-26.4, ನೊಣವಿನಕೆರೆ-48.5, ಹಾಲ್ಕುರಿಕೆ- 13.2 ಮಿಮೀ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> <strong>ಹಸು ಸಾವು, ಬಾಳೆಗೆ ನಷ್ಟ<br /> ಚಿಕ್ಕನಾಯಕನಹಳ್ಳಿ :</strong> ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಎರಡು ಹಸು ಸಾವು, ನೂರಾರು ಬಾಳೆ ಗಿಡಗಳು ನೆಲಕ್ಕೂರಳಿವೆ.<br /> <br /> ಬುಧವಾರ ಸಂಜೆ ತಾಲ್ಲೂಕಿನಾದ್ಯಂತ ಆರಂಭಗೊಂಡ ಮಳೆ ಗುರುವಾರ ಬೆಳಗಿನ ಜಾವದವರೆಗೂ ಸುರಿಯಿತು. ಗುಡುಗು, ಸಿಡಿಲು, ಗಾಳಿಯೊಂದಿಗೆ ಆರಂಭಗೊಂಡ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಎರೆಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಹಸುಗಳು ಬಲಿಯಾಗಿವೆ. <br /> </p>.<p>16ನೇ ವಾರ್ಡಿನಲ್ಲಿ ವಾಸವಿದ್ದ ಮುಸ್ತಾಫಾ ಖಾನ್ ಎಂಬುವರ ಮನೆ ಗೋಡೆ ಕುಸಿದಿದೆ. ಕಾಮಲಾಪುರದಲ್ಲಿನ ರೈತರೊಬ್ಬರಿಗೆ ಸೇರಿದ ಸುಮಾರು 500 ಬಾಳೆ ಗಿಡಗಳು ನೆಲಕ್ಕೊರಗಿವೆ. ಚಿಕ್ಕನಾಯಕನಹಳ್ಳಿ-35ಮಿಮೀ, ಮತಿಘಟ್ಟ-12.02, ದೊಡ್ಡೆಣ್ಣೆಗೆರೆ-16.03, ಹುಲಿಯಾರು-48.04, ಬೋರನಕಣಿವೆ-25.04, ಶೆಟ್ಟಕೆರೆ-56.04, ಸಿಂಗದಹಳ್ಳಿ-36.04ರಷ್ಟು ಮಳೆ ಸುರಿದಿದೆ.<br /> <br /> <strong>ಮೃತ ಕುಟುಂಬಗಳಿಗೆ ಪರಿಹಾರ: ಜಿಲ್ಲಾಧಿಕಾರಿ<br /> ಮಧುಗಿರಿ:</strong> ಪಟ್ಟಣದಲ್ಲಿ ಗೋಡೆ ಕುಸಿದು ಸಾವುನ್ನಪ್ಪಿದ ಮೃತರ ಕುಟುಂಬಗಳಿಗೆ ಪುರಸಭೆ ವತಿಯಿಂದ ತಲಾ 25 ಸಾವಿರ ಹಾಗೂ ಗಾಯಾಳುಗಳಿಗೆ ತಲಾ 5 ಸಾವಿರ ಪರಿಹಾರ ನೀಡುವಂತೆ ಪುರಸಭೆ ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.<br /> <br /> ಸ್ಧಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಮೃತರು ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಪುರಸಭೆ ಸದಸ್ಯರ ವಿಶೇಷ ಸಭೆ ಕರೆದು ಪರಿಹಾರ ಘೋಷಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ವೈದ್ಯಕೀಯ ವೆಚ್ಚ ಭರಿಸುವುದಾಗಿ ತಿಳಿಸಿದರು.<br /> <br /> ಇದೇ ವೇಳೆ ಜಿಲ್ಲಾಧಿಕಾರಿ ಪಟ್ಟಣ ದಲ್ಲಿ ಅಗತ್ಯವಿರುವ ಕಡೆ ಬಸ್ ತಂಗು ದಾಣಗಳು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದ್ದಾರೆ. ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ, ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಡೀ ವ್ಯಾಪಕ ಮಳೆ ಆಯಿತು. ಕಸಬಾದಲ್ಲಿ ಗರಿಷ್ಠ 62.5 ಮಿಮೀ ದಾಖಲಾಗಿದೆ.<br /> <br /> ಸಂಜೆ ಗುಡುಗು ಸಹಿತ ಆರಂಭವಾದ ಮಳೆ ಜನತೆಗೆ ತಂಪೆರೆಯಿತು. ಯಾವುದೇ ಹಾನಿಯಾದ ವರದಿಯಾಗಿಲ್ಲ. ಏಪ್ರಿಲ್ನಲ್ಲಿ ವಾಡಿಕೆ ಮಳೆ ಪ್ರಮಾಣ 30 ಮಿಮೀ ಆಗಿತ್ತು. ಆದರೆ ಈಗಾಗಲೇ ಸರಾಸರಿ 35 ಮಿಮೀ ದಾಖಲಾಗಿದೆ. ವಾಡಿಕೆಗಿಂತ ದುಪ್ಪಟ್ಟು ಮಳೆ ಬಿದ್ದಂತಾಗಿದೆ ಎನ್ನಲಾಗಿದೆ. ಕಸಬಾ-62.5 ಮಿಮೀ, ಹೊನ್ನವಳ್ಳಿ-5.2, ಕಿಬ್ಬನಹಳ್ಳಿ-26.4, ನೊಣವಿನಕೆರೆ-48.5, ಹಾಲ್ಕುರಿಕೆ- 13.2 ಮಿಮೀ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> <strong>ಹಸು ಸಾವು, ಬಾಳೆಗೆ ನಷ್ಟ<br /> ಚಿಕ್ಕನಾಯಕನಹಳ್ಳಿ :</strong> ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಎರಡು ಹಸು ಸಾವು, ನೂರಾರು ಬಾಳೆ ಗಿಡಗಳು ನೆಲಕ್ಕೂರಳಿವೆ.<br /> <br /> ಬುಧವಾರ ಸಂಜೆ ತಾಲ್ಲೂಕಿನಾದ್ಯಂತ ಆರಂಭಗೊಂಡ ಮಳೆ ಗುರುವಾರ ಬೆಳಗಿನ ಜಾವದವರೆಗೂ ಸುರಿಯಿತು. ಗುಡುಗು, ಸಿಡಿಲು, ಗಾಳಿಯೊಂದಿಗೆ ಆರಂಭಗೊಂಡ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಎರೆಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಹಸುಗಳು ಬಲಿಯಾಗಿವೆ. <br /> </p>.<p>16ನೇ ವಾರ್ಡಿನಲ್ಲಿ ವಾಸವಿದ್ದ ಮುಸ್ತಾಫಾ ಖಾನ್ ಎಂಬುವರ ಮನೆ ಗೋಡೆ ಕುಸಿದಿದೆ. ಕಾಮಲಾಪುರದಲ್ಲಿನ ರೈತರೊಬ್ಬರಿಗೆ ಸೇರಿದ ಸುಮಾರು 500 ಬಾಳೆ ಗಿಡಗಳು ನೆಲಕ್ಕೊರಗಿವೆ. ಚಿಕ್ಕನಾಯಕನಹಳ್ಳಿ-35ಮಿಮೀ, ಮತಿಘಟ್ಟ-12.02, ದೊಡ್ಡೆಣ್ಣೆಗೆರೆ-16.03, ಹುಲಿಯಾರು-48.04, ಬೋರನಕಣಿವೆ-25.04, ಶೆಟ್ಟಕೆರೆ-56.04, ಸಿಂಗದಹಳ್ಳಿ-36.04ರಷ್ಟು ಮಳೆ ಸುರಿದಿದೆ.<br /> <br /> <strong>ಮೃತ ಕುಟುಂಬಗಳಿಗೆ ಪರಿಹಾರ: ಜಿಲ್ಲಾಧಿಕಾರಿ<br /> ಮಧುಗಿರಿ:</strong> ಪಟ್ಟಣದಲ್ಲಿ ಗೋಡೆ ಕುಸಿದು ಸಾವುನ್ನಪ್ಪಿದ ಮೃತರ ಕುಟುಂಬಗಳಿಗೆ ಪುರಸಭೆ ವತಿಯಿಂದ ತಲಾ 25 ಸಾವಿರ ಹಾಗೂ ಗಾಯಾಳುಗಳಿಗೆ ತಲಾ 5 ಸಾವಿರ ಪರಿಹಾರ ನೀಡುವಂತೆ ಪುರಸಭೆ ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.<br /> <br /> ಸ್ಧಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಮೃತರು ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಪುರಸಭೆ ಸದಸ್ಯರ ವಿಶೇಷ ಸಭೆ ಕರೆದು ಪರಿಹಾರ ಘೋಷಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ವೈದ್ಯಕೀಯ ವೆಚ್ಚ ಭರಿಸುವುದಾಗಿ ತಿಳಿಸಿದರು.<br /> <br /> ಇದೇ ವೇಳೆ ಜಿಲ್ಲಾಧಿಕಾರಿ ಪಟ್ಟಣ ದಲ್ಲಿ ಅಗತ್ಯವಿರುವ ಕಡೆ ಬಸ್ ತಂಗು ದಾಣಗಳು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದ್ದಾರೆ. ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ, ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>