ಮೊದಲಿಗೆ ಬಾಳೆ ಮುಹೂರ್ತದಿಂದ ಆರಂಭಗೊಂಡು, ಅಕ್ಕಿ, ಕಟ್ಟಿಗೆ ಹಾಗೂ ಭತ್ತ ಮುಹೂರ್ತ ನಡೆಯಲಿವೆ. ಪರ್ಯಾಯದ ಅವಧಿಯಲ್ಲಿ ಭಕ್ತರಿಗೆ ಅನ್ನದಾಸೋಹಕ್ಕೆ ಅಗತ್ಯವಾದ ಪರಿಕರಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವುದು ಈ ಮುಹೂರ್ತಗಳ ಹಿಂದಿರುವ ಉದ್ದೇಶ. ಪರ್ಯಾಯ ಆರಂಭದ ಹೊತ್ತಿಗೆ ಭತ್ತ ಮುಹೂರ್ತ ಕೂಡ ನಡೆಯಲಿದೆ.