<p><strong>ಉಡುಪಿ:</strong> ಸರ್ಕಾರಕ್ಕೆ ಜಾತಿ ಪದ್ಧತಿ ನಿರ್ಮೂಲನೆಯ ಬಗ್ಗೆ ಕಾಳಜಿ ಇದ್ದರೆ ಸರ್ಕಾರಿ ದಾಖಲೆಗಳಲ್ಲಿ ಜಾತಿಯ ಕಾಲಂ ರದ್ದು ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.</p>.<p>ರಥಬೀದಿಯಲ್ಲಿರುವ ಕನಕಗುಡಿ ಮುಂಭಾಗದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಜಾತಿ ನಿರ್ಮೂಲನೆಯಾಗಬೇಕು ಎನ್ನುವ ಸರ್ಕಾರ ಜಾತಿ ಕಾಲಂ ರದ್ದು ಮಾಡಲಿ’ ಎಂದರು.</p>.<p>ಎಲ್ಲರಿಗೂ ಸಂಸ್ಕಂತ ಕಲಿಸುವ ಕಾರ್ಯ ಆಗಬೇಕು. ಇದರಿಂದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ಜನಸಾಮಾನ್ಯರೂ ಅರಿಯಬಹುದು ಎಂದು ಸ್ವಾಮೀಜಿ ಸಲಹೆ ನೀಡಿದರು.</p>.<p>ಕನ್ನಡಕ್ಕೆ ಗೌರವ:</p>.<p>ತುಳುನಾಡಿನಲ್ಲಿ ಕನ್ನಡ ಉಳಿಸುವ ಕಾರ್ಯವನ್ನು ಇಲ್ಲಿನವರು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದಾರೆ. ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ 99ರಷ್ಟು ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲೇ ನಡೆಯುತ್ತಿವೆ ಎಂದು ಕನ್ನಡ ನಾಮಫಲಕ ತೆರವು ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.</p>.<p>ಕನ್ನಡ ನಾಮಫಲಕ ಅಳವಡಿಕೆ:</p>.<p>ಕೃಷ್ಣಮಠದ ಮುಖ್ಯದ್ವಾರದಲ್ಲಿದ್ದ ಕನ್ನಡ ನಾಮಫಲಕ ತೆರವಿಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗುರುವಾರ ಮಠದಿಂದ ಕನ್ನಡ ನಾಮಫಲಕ ಹಾಕಲಾಗಿದೆ. ಮಠದ ಗೋಪುರದ ಮೇಲೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀಕೃಷ್ಣಮಠ’ ಎಂಬ ಫಲಕ ರಾರಾಜಿಸುತ್ತಿದೆ.</p>.<p>ಈಚೆಗೆ ಮಠದಲ್ಲಿ ಕನ್ನಡ ನಾಮಫಲಕ ತೆರವಿಗೆ ಜಿಲ್ಲಾ ಕಸಾಪ ಸೇರಿ ಹಲವು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಸರ್ಕಾರಕ್ಕೆ ಜಾತಿ ಪದ್ಧತಿ ನಿರ್ಮೂಲನೆಯ ಬಗ್ಗೆ ಕಾಳಜಿ ಇದ್ದರೆ ಸರ್ಕಾರಿ ದಾಖಲೆಗಳಲ್ಲಿ ಜಾತಿಯ ಕಾಲಂ ರದ್ದು ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.</p>.<p>ರಥಬೀದಿಯಲ್ಲಿರುವ ಕನಕಗುಡಿ ಮುಂಭಾಗದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಜಾತಿ ನಿರ್ಮೂಲನೆಯಾಗಬೇಕು ಎನ್ನುವ ಸರ್ಕಾರ ಜಾತಿ ಕಾಲಂ ರದ್ದು ಮಾಡಲಿ’ ಎಂದರು.</p>.<p>ಎಲ್ಲರಿಗೂ ಸಂಸ್ಕಂತ ಕಲಿಸುವ ಕಾರ್ಯ ಆಗಬೇಕು. ಇದರಿಂದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ಜನಸಾಮಾನ್ಯರೂ ಅರಿಯಬಹುದು ಎಂದು ಸ್ವಾಮೀಜಿ ಸಲಹೆ ನೀಡಿದರು.</p>.<p>ಕನ್ನಡಕ್ಕೆ ಗೌರವ:</p>.<p>ತುಳುನಾಡಿನಲ್ಲಿ ಕನ್ನಡ ಉಳಿಸುವ ಕಾರ್ಯವನ್ನು ಇಲ್ಲಿನವರು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದಾರೆ. ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ 99ರಷ್ಟು ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲೇ ನಡೆಯುತ್ತಿವೆ ಎಂದು ಕನ್ನಡ ನಾಮಫಲಕ ತೆರವು ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.</p>.<p>ಕನ್ನಡ ನಾಮಫಲಕ ಅಳವಡಿಕೆ:</p>.<p>ಕೃಷ್ಣಮಠದ ಮುಖ್ಯದ್ವಾರದಲ್ಲಿದ್ದ ಕನ್ನಡ ನಾಮಫಲಕ ತೆರವಿಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗುರುವಾರ ಮಠದಿಂದ ಕನ್ನಡ ನಾಮಫಲಕ ಹಾಕಲಾಗಿದೆ. ಮಠದ ಗೋಪುರದ ಮೇಲೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀಕೃಷ್ಣಮಠ’ ಎಂಬ ಫಲಕ ರಾರಾಜಿಸುತ್ತಿದೆ.</p>.<p>ಈಚೆಗೆ ಮಠದಲ್ಲಿ ಕನ್ನಡ ನಾಮಫಲಕ ತೆರವಿಗೆ ಜಿಲ್ಲಾ ಕಸಾಪ ಸೇರಿ ಹಲವು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>