ಕಾರ್ಕಳ: ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಬುಧವಾರ ಭೇಟಿ, ಕ್ಯಾಂಡಲ್ ಉರಿಸಿ ಹರಕೆ ಸಲ್ಲಿಸಿದರು.
ಬೆಸಿಲಿಕ ನಿರ್ದೇಶಕ ಫಾ.ಆಲ್ಬನ್ ಡಿಸೋಜ, ಫಾ.ರೋಮನ್ ಮಸ್ಕರೇನಸ್, ಸಹಾಯಕ ಫಾ.ಲ್ಯಾರಿ ಪಿಂಟೊ, ಆಡಳಿತ ಸಮಿತಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿ ಸದಸ್ಯರಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೊ, ರಿತೇಶ್ ಪಿಂಟೊ, ರೋಶನ್ ಸಾಲಿಸ್ ಇದ್ದರು.