ನಮ್ಮಲ್ಲಿ ಮೂಲಸೌಕರ್ಯಗಳಿಗೆ ಏನೂ ಕೊರತೆ ಇಲ್ಲ. ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಮುಂದೆ ಬಿ.ಸಿ.ಎ ಆರಂಭಿಸುವ ಯೋಜನೆ ಇದೆ. ಇದಕ್ಕೆ ಉಪನ್ಯಾಸಕರು ಕಂಪ್ಯೂಟರ್ ಶಿಕ್ಷಕರ ಅಗತ್ಯ ಇದೆ. ಮುಂದೆ ಆರಂಭಿಸಿದರೆ ಸರ್ಕಾರದಿಂದ ಸೌಕರ್ಯಗಳು ಸಿಗಬಹುದು. ಇಲ್ಲಿ ಹೆಚ್ಚಾಗಿ ಹೊರ ಜಿಲ್ಲೆಯ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮಹಿಳಾ ಹಾಸ್ಟೆಲ್ ಕಾಪುವಿನಲ್ಲಿ ನಿರ್ಮಾಣವಾದರೆ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪ್ರಾಂಶುಪಾಲ ಗೋಪಾಲಕೃಷ್ಣ ಎಂ. ಗಾಂವ್ಕರ್ ತಿಳಿಸಿದರು.