ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಐಸಿ: ಅಧ್ಯಕ್ಷರಾಗಿ ಕಿಶೋರ್ ಆಳ್ವ ಅಧಿಕಾರ ಸ್ವೀಕಾರ

Last Updated 23 ಜೂನ್ 2018, 10:58 IST
ಅಕ್ಷರ ಗಾತ್ರ

ಪಡುಬಿದ್ರಿ: ಬೆಂಗಳೂರು ಚೇಂಬರ್ಸ್‌ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್‌ (ಬಿಸಿಐಸಿ) ಸಂಸ್ಥೆಯ ಅಧ್ಯಕ್ಷರಾಗಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ನೇಮಕಗೊಂಡಿದ್ದಾರೆ. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಬೆಂಗಳೂರಿನ ಹೋಟೆಲ್ ಲಿಮೆರಿಡಿಯನ್‌ನಲ್ಲಿ ಬಿಸಿಐಸಿ ಸಂಸ್ಥೆಯ 41ನೇ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಮುಂಬರುವ ದಿನಗಳಲ್ಲಿ ಬಿಸಿಐಸಿ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆಗೆ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದೆ. ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿನ ಉತ್ಪಾದನಾ ವಲಯದಲ್ಲಿ ಸರ್ಕಾರಿ ನೀತಿಯ ಉಪಕ್ರಮಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂದು ಆಳ್ವ ಸಭೆಗೆ ತಿಳಿಸಿದರು.

ಬಿಸಿಐಸಿ ಅಧ್ಯಕ್ಷ ಏಎನ್‌ಜಿ ಸಂಸ್ಥೆಯ ಏಷ್ಯ ಗ್ರೂಪ್ ಜನರಲ್ ಮ್ಯಾನೇಜರ್‌ ಆಗಿದ್ದ ಶ್ರೀದೇವಿ ಪಂಕಜಮ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪ್ರಧಾನಿ ದೇವೆಗೌಡ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ನ ಪ್ರೊ. ವಸಂತಿ ಶ್ರೀನಿವಾಸನ್, ಟಾಟಾ ಸೊನ್ಸ್ ಕಸ್ಟೋಡಿಯನ್ ಹರೀಶ್ ಭಟ್, ಸ್ಥಾಪಕರಾದ ಡಾ.ಆನಂದ ದೇಶಪಾಂಡೆ, ಜೆ.ಪಿ.ಮೊರ್ಗಾನ್‌ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್‌ಕುಮಾರ್, ಬಿಸಿಐಸಿ ಸಂಸ್ಥೆಯ ಉಪಾಧ್ಯಕ್ಷ ದೇವೇಶ್ ಅಗರವಾಲ್, ಕಾರ್ಯದರ್ಶಿ ರಾಜು ಭಟ್ನಾಗರ್ ಮತ್ತು ಹಲವು ಕೈಗಾರಿಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಳ್ವರ ಪರಿಚಯ: ದಕ್ಷಿಣ ಕನ್ನಡ ಜಿಲ್ಲೆಯವರಾದ ಕಿಶೋರ್ ಆಳ್ವ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಹಲವು ಸಂಘಟನೆಗಳಲ್ಲಿ ಅಧ್ಯಕ್ಷರಾಗಿದ್ದರು. 10 ವರ್ಷಗಳಿಂದ ಬಿಸಿಐಸಿ ಸಂಸ್ಥೆಯಲ್ಲಿ ಪ್ರಮುಖ ವಿವಿಧ ಹುದ್ದೆ ಅಲಂಕರಿಸಿದ್ದ ಇವರು ಸರ್ಕಾರದ ಜತೆಗೆ ಕೈಗಾರಿಕಾ ಅಭಿವೃದ್ಧಿ ಸಮಸ್ಯೆ ಚರ್ಚಿಸಲು ವೇದಿಕೆ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಳ್ವ ಅವರು ಅದಾನಿ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016 ರಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಅದಾನಿ ಸಮೂಹವನ್ನು ರಾಜ್ಯದಲ್ಲಿ ಆರಂಭಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಅದಾನಿ ಸಮೂಹವು ಯುಪಿಸಿಎಲ್ ಯೋಜನೆ ವಿಸ್ತರಣೆಗೆ ₹11,500 ಕೋಟಿ, ಸೌರ ವಿದ್ಯುತ್ ಯೋಜನೆಗೆ ₹7,000 ಕೋಟಿ ಮತ್ತು ನವ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಜೆಟ್ಟಿ ಸ್ಥಾಪಿಸಲು ₹ 5,00 ಕೋಟಿ ಹೂಡಿಕೆ ಮಾಡಲು ಘೋಷಿಸಿತ್ತು.

ಏನಿದು ಬಿಸಿಐಸಿ

ಬೆಂಗಳೂರು ಚೇಂಬರ್ಸ್‌ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್‌ (ಬಿಸಿಐಸಿ) ಎಂಬ ಸಂಸ್ಥೆಯು ಈ ಹಿಂದೆ ಗ್ರೇಟರ್ ಮೈಸೂರು ಚೇಂಬರ್ ಆಫ್ ಇಂಡಸ್ಟ್ರೀಸ್ ಎಂದು ಕರೆಯಲಾಗುತಿತ್ತು. ಕರ್ನಾಟಕ ರಾಜ್ಯದಲ್ಲಿ ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರತಿನಿಧಿಸುವ ಅಪೇಕ್ಸ್‌ ಚೇಂಬರ್‌ ಆಫ್ ಕಾಮರ್ಸ್‌ ಆಗಿದೆ. ರಾಜ್ಯದ ಶೇ 95 ರಷ್ಟು ಬಂಡವಾಳ ಹೂಡಿಕೆಯನ್ನು ಮತ್ತು ಶೇ 90 ರಷ್ಟು ಉದ್ಯೋಗವನ್ನು ಪ್ರತಿನಿಧಿಸುತ್ತಿದೆ. ಪ್ರಸಕ್ತವಾಗಿ ಬಿಸಿಐಸಿ ಉದ್ಯಮದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 750 ಕಂಪನಿಗಳ ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಐಟಿ, ಐಟಿಈಎಸ್, ಬಿಟಿ, ಎಂಜಿನಿಯರಿಂಗ್, ಕನ್ಸಲ್ಟೆನ್ಸಿ ಸಂಸ್ಥೆಗಳು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT