ಅಶೋಕ್ ಒಪ್ಪದಿದ್ದಾಗ ರೆಸಾರ್ಟ್ಗೆ ಕರದೊಯ್ದು ಹಲ್ಲೆ ನಡೆಸಿದ್ದರು. ಬಳಿಕ ಆರೋಪಿಗಳು ಶನಿವಾರ ಮಹೇಶ್ ಅವರನ್ನು ಕೆನರಾ ಬ್ಯಾಂಕಿಗೆ ಕರೆತಂದು ಹಣ ಡ್ರಾ ಮಾಡಿಕೊಡುವಂತೆ ಬಲವಂತ ಮಾಡಿದ್ದರು. ಈ ಸಂದರ್ಭ ಮಹೇಶ್ ಜೋರಾಗಿ ಬೊಬ್ಬೆ ಹಾಕಿದಾಗ, ಆರೋಪಿಗಳು ಮಹೇಶ್ ಬಳಿಯಿದ್ದ ₹ 1,99,500 ನಗದು, 2 ಮೊಬೈಲ್, ವಾಚ್, ಮಾರ್ಕ್ಸ್ ಕಾರ್ಡ್, ಕಂಪೆನಿ ಪರವಾನಗಿ, ಬೈಕ್ನ ಆರ್ಸಿ ಕಾರ್ಡ್, ಡಿಎಲ್, ಚೆಕ್, ಪಾಸ್ ಪುಸ್ತಕ ಹಾಗೂ ಇತರೆ ದಾಖಲೆಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.