ದಲಿತರ ಪ್ರಾಣ, ಮಾನಕ್ಕೆ ಬೆಲೆ ಇಲ್ಲವಾಗಿದೆ. ಸೆವೆನ್ ಹಿಲ್ಸ್ ಕಂಪೆನಿಯ ಪಾಲುದಾರ ಡಿ.ಸುಧಾಕರ್ ಮೋಸದಿಂದ ಯಲಹಂಕ ಗ್ರಾಮದ ಸುಬ್ಬಮ್ಮ ಅವರಿಗೆ ಸೇರಿದ 108/1 ಸರ್ವೆ ನಂಬರ್ ಜಮೀನನ್ನು ಕಬಳಿಕೆ ಮಾಡಿರುವುದು ಸ್ಪಷ್ಟವಾಗಿ ದಾಖಲೆ ಇದೆ. ವಿವಾದ ನ್ಯಾಯಾಲಯದಲ್ಲಿ ಇರುವಾಗ ಸಚಿವರು ರೌಡಿಗಳನ್ನು ಕಳಿಸಿ ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಜೆಸಿಬಿಯಿಂದ ಮನೆ ನೆಲಸಮ ಮಾಡಿಸಿರುವುದು ಖಂಡನೀಯ.