ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ, ಬೈಹುಲ್ಲು, ಪಶು ಆಹಾರ ದರ ಏರಿಕೆ, ಪಶು ಚಿಕಿತ್ಸೆ ವೆಚ್ಚ, ಕೂಲಿ ಸೇರಿದಂತೆ ಗೋವುಗಳ ಸಾಕಾಣಿಕೆ ಮಾಡಲು ಹೈನುಗಾರರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಹಾಲಿನ ದರಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಲೀಟರ್ಗೆ ಕೊಡುತ್ತಿರುವ ಪ್ರೋತ್ಸಾಹ ಧನ ಪ್ರಮಾಣವನ್ನು ಕನಿಷ್ಠ ₹ 10ಕ್ಕೆ ಹೆಚ್ಚಿಸಬೇಕು.