ಶಿರ್ವ: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿಗಳಿಗೆ ‘ಬೆಂಕಿಯಿಲ್ಲದೆ ಅಡುಗೆ’ ಎಂಬ ಶೀರ್ಷಿಕೆಯಡಿ ಫುಡ್ ಫೆಸ್ಟ್ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ತಿರುಮಲೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಪಾಕ ಪ್ರಾವಿಣ್ಯತೆ, ವ್ಯವಹಾರ ಕೌಶಲ, ಉದ್ಯಮಶೀಲತೆ, ಮಾರುಕಟ್ಟೆ, ಲೆಕ್ಕಪತ್ರ ನಿರ್ವಹಣೆ, ಹಣಕಾಸು ವ್ಯವಹಾರದ ಬಗ್ಗೆ ತಿಳಿಸಿಕೊಡುವುದು ಫುಡ್ ಫೆಸ್ಟ್ ಉದ್ದೇಶ ಎಂದರು.
4 ವಿದ್ಯಾರ್ಥಿಗಳಂತೆ 5 ತಂಡಗಳು ಭಾಗವಹಿಸಿದ್ದು, ವಿವಿಧ ಬಗೆಯ ಸಿಹಿ ತಿಂಡಿ, ಪಾನೀಯಗಳನ್ನು ತಯಾರಿಸಿದರು. ಎಂ.ಬಿ.ಎ ವಿಭಾಗದ ನಿರ್ದೇಶಕ ಸೂರಜ್ ಪ್ರಾನ್ಸಿಸ್ ನೊರೊನ್ಹಾ ಇದ್ದರು.