<p><strong>ಉಡುಪಿ</strong>: ಪಡುತೋನ್ಸೆ ಗುಜ್ಜರಬೆಟ್ಟಿನ ನಿವಾಸಿ, ಆರ್ಥಿಕವಾಗಿ ದುರ್ಬಲರಾಗಿರುವ ಶುಭಲಕ್ಷ್ಮಿ ಅವರಿಗೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹೂಡೆ ಶಾಖೆಯಿಂದ ಮನೆ ಕಟ್ಟಿಸಿಕೊಡಲಾಯಿತು.</p>.<p>ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮನೆಯ ಕೀಲಿಕೈ ಅನ್ನು ಡಾ.ಶಹನವಾಝ್ ಅವರು ಶುಭಲಕ್ಷ್ಮಿ ಅವರಿಗೆ ಹಸ್ತಾಂತರಿಸಿದರು.</p>.<p>ಬಳಿಕ ಮಾತನಾಡಿ, ಜಮಾತೆ ಇಸ್ಲಾಮಿ ಹಿಂದ್ ದುರ್ಬಲ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುತ್ತಿರುವುದು ಪ್ರಶಂಸನೀಯ ಕೆಲಸ. ಕೋವಿಡ್ ಸಂದರ್ಭದಲ್ಲೂ ಸಂಸ್ಥೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ನೆರವು ನೀಡಿದೆ ಎಂದು ಶ್ಲಾಘಿಸಿದರು.</p>.<p>ಮುಖಂಡರಾದ ನಾರಾಯಣ ಮಣೂರು ಮಾತನಾಡಿ ಹೋರಾಟಗಳ ಹೊರತಾಗಿಯೂ ಜನರ ಸಮಸ್ಯೆ ಹಾಗೂ ನೋವುಗಳಿಗೆ ವಿಭಿನ್ನ ರೀತಿಯಲ್ಲಿ ಸ್ಪಂದಿಸಬಹುದು ಎಂಬುದನ್ನು ಜಮಾತೆ ಇಸ್ಲಾಮಿ ಹಿಂದ್ ತೋರಿಸಿಕೊಟ್ಟಿದೆ.</p>.<p>ಜಾತಿ ಧರ್ಮಗಳ ಮೇರೆ ಮೀರಿ ಸಮಾಜದ ಕಣ್ಣೀರು ಒರೆಸುವುದು, ಆಸರೆ ಕಲ್ಪಿಸುವುದು ಕೂಡ ಹೋರಾಟವೇ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಉದ್ದೇಶವೂ ಜನರ ನೋವಿಗೆ ಆಸರೆಯಾಗುವುದು ಆಗಿತ್ತು ಎಂದರು.</p>.<p>ಜಮಾತೆ ಇಸ್ಲಾಮಿ ಹಿಂದ್ ಹೂಡೆ ಸಂಘಟನೆ ಐದಾರು ವರ್ಷಗಳಲ್ಲಿ ಜಾತಿಧರ್ಮಗಳ ಹಂಗಿಲ್ಲದೆ 32 ಮನೆಗಳನ್ನು ನಿರ್ಮಿಸಿಕೊಟ್ಟಿರುವುದು ಸಂತೋಷದ ಸಂಗತಿ ಎಂದರು.</p>.<p>ತೋನ್ಸೆ-ಹೂಡೆ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ ನೆರೆ ಹೊರೆಯವರು ಆಹಾರ, ಸೂರು ಮತ್ತು ಇತರ ಅಗತ್ಯಗಳಿಗೆ ಪರಿತಪಿಸುವಾಗ ನಿರ್ಲಿಪ್ತರಾಗಿ ಬದುಕುವುದು ಧಾರ್ಮಿಕತೆಯಲ್ಲ ಎಂದರು.</p>.<p>ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಉಡುಪಿಯ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ತೋನ್ಸೆ ಪಂಚಾಯಿತಿ ಕಾರ್ಯದರ್ಶಿ ದಿನಕರ್ ಬೇಂಗ್ರೆ, ಸತೀಶ್ ಮಲ್ಪೆ, ಪಂಚಾಯಿತಿ ಸದಸ್ಯೆ ಸುಝನಾ ಡಿಸೋಝಾ ಮಾತನಾಡಿದರು.</p>.<p>ಪಂಚಾಯಿತಿ ಸದಸ್ಯ ವಿಜಯ ಪಡುಕುದ್ರು, ಮಹೇಶ್ ಹೂಡೆ, ಕುಸುಮ ಗುಜ್ಜರಬೆಟ್ಟು, ಆಶಾ ತಿಮ್ಮಣ್ಣಕುದ್ರು, ಯಶೋಧಾ ಕೆಮ್ಮಣ್ಣು, ಎಚ್ಆರ್ಎಸ್ ಸಂಘಟನೆಯ ಹಸನ್ ಕೋಡಿಬೇಂಗ್ರೆ, ಝೈನುಲ್ಲಾ ಹೂಡೆ, ಎಸ್.ಐ.ಒ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.</p>.<p>ಮೌಲಾನಾ ತಾರೀಕ್ ಕುರಾನ್ ಪಠಿಸಿದರು. ಸಾಲಿಡಾರಿಟಿ ಯೂತ್ ಮೂಮೆಂಟ್ನ ಯಾಸೀನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಪಡುತೋನ್ಸೆ ಗುಜ್ಜರಬೆಟ್ಟಿನ ನಿವಾಸಿ, ಆರ್ಥಿಕವಾಗಿ ದುರ್ಬಲರಾಗಿರುವ ಶುಭಲಕ್ಷ್ಮಿ ಅವರಿಗೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹೂಡೆ ಶಾಖೆಯಿಂದ ಮನೆ ಕಟ್ಟಿಸಿಕೊಡಲಾಯಿತು.</p>.<p>ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮನೆಯ ಕೀಲಿಕೈ ಅನ್ನು ಡಾ.ಶಹನವಾಝ್ ಅವರು ಶುಭಲಕ್ಷ್ಮಿ ಅವರಿಗೆ ಹಸ್ತಾಂತರಿಸಿದರು.</p>.<p>ಬಳಿಕ ಮಾತನಾಡಿ, ಜಮಾತೆ ಇಸ್ಲಾಮಿ ಹಿಂದ್ ದುರ್ಬಲ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುತ್ತಿರುವುದು ಪ್ರಶಂಸನೀಯ ಕೆಲಸ. ಕೋವಿಡ್ ಸಂದರ್ಭದಲ್ಲೂ ಸಂಸ್ಥೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ನೆರವು ನೀಡಿದೆ ಎಂದು ಶ್ಲಾಘಿಸಿದರು.</p>.<p>ಮುಖಂಡರಾದ ನಾರಾಯಣ ಮಣೂರು ಮಾತನಾಡಿ ಹೋರಾಟಗಳ ಹೊರತಾಗಿಯೂ ಜನರ ಸಮಸ್ಯೆ ಹಾಗೂ ನೋವುಗಳಿಗೆ ವಿಭಿನ್ನ ರೀತಿಯಲ್ಲಿ ಸ್ಪಂದಿಸಬಹುದು ಎಂಬುದನ್ನು ಜಮಾತೆ ಇಸ್ಲಾಮಿ ಹಿಂದ್ ತೋರಿಸಿಕೊಟ್ಟಿದೆ.</p>.<p>ಜಾತಿ ಧರ್ಮಗಳ ಮೇರೆ ಮೀರಿ ಸಮಾಜದ ಕಣ್ಣೀರು ಒರೆಸುವುದು, ಆಸರೆ ಕಲ್ಪಿಸುವುದು ಕೂಡ ಹೋರಾಟವೇ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಉದ್ದೇಶವೂ ಜನರ ನೋವಿಗೆ ಆಸರೆಯಾಗುವುದು ಆಗಿತ್ತು ಎಂದರು.</p>.<p>ಜಮಾತೆ ಇಸ್ಲಾಮಿ ಹಿಂದ್ ಹೂಡೆ ಸಂಘಟನೆ ಐದಾರು ವರ್ಷಗಳಲ್ಲಿ ಜಾತಿಧರ್ಮಗಳ ಹಂಗಿಲ್ಲದೆ 32 ಮನೆಗಳನ್ನು ನಿರ್ಮಿಸಿಕೊಟ್ಟಿರುವುದು ಸಂತೋಷದ ಸಂಗತಿ ಎಂದರು.</p>.<p>ತೋನ್ಸೆ-ಹೂಡೆ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ ನೆರೆ ಹೊರೆಯವರು ಆಹಾರ, ಸೂರು ಮತ್ತು ಇತರ ಅಗತ್ಯಗಳಿಗೆ ಪರಿತಪಿಸುವಾಗ ನಿರ್ಲಿಪ್ತರಾಗಿ ಬದುಕುವುದು ಧಾರ್ಮಿಕತೆಯಲ್ಲ ಎಂದರು.</p>.<p>ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಉಡುಪಿಯ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ತೋನ್ಸೆ ಪಂಚಾಯಿತಿ ಕಾರ್ಯದರ್ಶಿ ದಿನಕರ್ ಬೇಂಗ್ರೆ, ಸತೀಶ್ ಮಲ್ಪೆ, ಪಂಚಾಯಿತಿ ಸದಸ್ಯೆ ಸುಝನಾ ಡಿಸೋಝಾ ಮಾತನಾಡಿದರು.</p>.<p>ಪಂಚಾಯಿತಿ ಸದಸ್ಯ ವಿಜಯ ಪಡುಕುದ್ರು, ಮಹೇಶ್ ಹೂಡೆ, ಕುಸುಮ ಗುಜ್ಜರಬೆಟ್ಟು, ಆಶಾ ತಿಮ್ಮಣ್ಣಕುದ್ರು, ಯಶೋಧಾ ಕೆಮ್ಮಣ್ಣು, ಎಚ್ಆರ್ಎಸ್ ಸಂಘಟನೆಯ ಹಸನ್ ಕೋಡಿಬೇಂಗ್ರೆ, ಝೈನುಲ್ಲಾ ಹೂಡೆ, ಎಸ್.ಐ.ಒ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.</p>.<p>ಮೌಲಾನಾ ತಾರೀಕ್ ಕುರಾನ್ ಪಠಿಸಿದರು. ಸಾಲಿಡಾರಿಟಿ ಯೂತ್ ಮೂಮೆಂಟ್ನ ಯಾಸೀನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>