<p><strong>ಪಡುಬಿದ್ರಿ:</strong> ಮಾನವೀಯ ನೆಲೆಯಲ್ಲಿ ಚಿನ್ನವನ್ನು ನೀಡಿ ವಾಪಾಸು ಕೇಳಿದಾಗ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮುಲ್ಕಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಮಮತಾ ಮೋಸ ಹೋದ ಮಹಿಳೆ.</p>.<p>ಸೌಮ್ಯಾ ಎಂಬಾಕೆ ಪರಿಚಯ ಮಾಡಿಕೊಂಡು ತಾನು ಕಷ್ಟದಲ್ಲಿ ಇದ್ದೇನೆ ಎಂದು ಪದೇ ಪದೇ ಕೇಳಿದಾಗ, ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ನಂಬಿ, ತನ್ನಲ್ಲಿದ್ದ ₹1.5ಲಕ್ಷ, 80 ಗ್ರಾಂ ತೂಕದ ಚಿನ್ನದ ನಕ್ಲೆಸ್, 2 ಉಂಗುರ, ಒಂದು ಸರ ಎರಡು ಪೆಂಡೆಂಟ್, ಮೂರು ಜೊತೆ ಕಿವಿಯೋಲೆಯನ್ನು ನೀಡಿರುವುದಾಗಿ ಮಮತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆದರೆ ಹಣ ಮತ್ತು ಚಿನ್ನವನ್ನು ವಾಪಾಸು ನೀಡುವಂತೆ ಪದೇ ಪದೇ ಕೇಳಿದಾಗ ಚಿನ್ನಾಭರಣವನ್ನು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಸುಧೀಂದ್ರ ಪೈನಾನ್ಸ್ ಕಾರ್ಪೋರೇಶನ್ನಲ್ಲಿ ಅಡವಿಟ್ಟು ₹3,51,900 ಸಾಲ ಪಡೆದಿರುವುದಾಗಿ ಸೌಮ್ಯಾ ತಿಳಿಸಿದ್ದಾಳೆ. ಚಿನ್ನಾಭರಣಗಳನ್ನು ಬಿಡಿಸಿ ಕೊಡುವಂತೆ ಕೇಳಿದಾಗ ಜೀವ ಬೆದರಿಕೆ ಒಡ್ಡಿರುವುದಾಗಿ ಪಡುಬಿದ್ರಿ ಠಾಣೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ:</strong> ಮಾನವೀಯ ನೆಲೆಯಲ್ಲಿ ಚಿನ್ನವನ್ನು ನೀಡಿ ವಾಪಾಸು ಕೇಳಿದಾಗ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮುಲ್ಕಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಮಮತಾ ಮೋಸ ಹೋದ ಮಹಿಳೆ.</p>.<p>ಸೌಮ್ಯಾ ಎಂಬಾಕೆ ಪರಿಚಯ ಮಾಡಿಕೊಂಡು ತಾನು ಕಷ್ಟದಲ್ಲಿ ಇದ್ದೇನೆ ಎಂದು ಪದೇ ಪದೇ ಕೇಳಿದಾಗ, ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ನಂಬಿ, ತನ್ನಲ್ಲಿದ್ದ ₹1.5ಲಕ್ಷ, 80 ಗ್ರಾಂ ತೂಕದ ಚಿನ್ನದ ನಕ್ಲೆಸ್, 2 ಉಂಗುರ, ಒಂದು ಸರ ಎರಡು ಪೆಂಡೆಂಟ್, ಮೂರು ಜೊತೆ ಕಿವಿಯೋಲೆಯನ್ನು ನೀಡಿರುವುದಾಗಿ ಮಮತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆದರೆ ಹಣ ಮತ್ತು ಚಿನ್ನವನ್ನು ವಾಪಾಸು ನೀಡುವಂತೆ ಪದೇ ಪದೇ ಕೇಳಿದಾಗ ಚಿನ್ನಾಭರಣವನ್ನು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಸುಧೀಂದ್ರ ಪೈನಾನ್ಸ್ ಕಾರ್ಪೋರೇಶನ್ನಲ್ಲಿ ಅಡವಿಟ್ಟು ₹3,51,900 ಸಾಲ ಪಡೆದಿರುವುದಾಗಿ ಸೌಮ್ಯಾ ತಿಳಿಸಿದ್ದಾಳೆ. ಚಿನ್ನಾಭರಣಗಳನ್ನು ಬಿಡಿಸಿ ಕೊಡುವಂತೆ ಕೇಳಿದಾಗ ಜೀವ ಬೆದರಿಕೆ ಒಡ್ಡಿರುವುದಾಗಿ ಪಡುಬಿದ್ರಿ ಠಾಣೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>