<p>ಉಡುಪಿ: ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ 91 ಲಕ್ಷ ನೀಡಲು ಯುನಿವರ್ಸಲ್ ಸೊಂಒ ಜನರಲ್ ಇನ್ಶುರೆನ್ಸ್ ವಿಮಾ ಸಂಸ್ಥೆಯು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮಾಡಿಕೊಂಡಿದೆ.</p>.<p>ಉಡುಪಿ ನಗರಸಭೆಯ ಉದ್ಯೋಗಿಯೊಬ್ಬರು 2021 ಜ.16ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಕಡೆಯವರು ಉಡುಪಿಯ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅಪಘಾತ ಮಾಡಿದ ಕಾರಿನ ವಿಮೆಯು ಯುನಿವರ್ಸಲ್ ಸೊಂಪೊ ಇನ್ಸೂರೆನ್ಸ್ ಸಂಸ್ಥೆಗೆ ಒಳಪಟ್ಟಿತ್ತು.</p>.<p>ಈ ಸಂಬಂಧ ಪ್ರಕರಣದಲ್ಲಿ ವಕೀಲರ ಅಭಿಪ್ರಾಯ ಪಡೆದ ವಿಮಾ ಕಂಪೆನಿಯು ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ನಿರ್ಧರಿಸಿತು. ಅದರಂತೆ ಅರ್ಜಿದಾರರು ಹಾಗೂ ವಿಮಾ ಕಂಪನಿಯು ರಾಜಿ ಸಂಧಾನ ಪತ್ರಕ್ಕೆ ಸಹಿ ಹಾಕಿದ್ದು 91 ಲಕ್ಷ ಪರಿಹಾರ ನೀಡಲು ಒಪ್ಪಿಕೊಳ್ಳಲಾಗಿದೆ.</p>.<p>ಜಿಲ್ಲಾ ಮಟ್ಟದ ಲೋಕ್ ಅದಾಲತ್ನಲ್ಲಿ ಖಾಸಗಿ ವಿಮಾ ಸಂಸ್ಥೆ ದೊಡ್ಡಮೊತ್ತದ ಪರಿಹಾರ ನೀಡಲು ಒಪ್ಪಿರುವುದು ಇದೇ ಮೊದಲ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯ ವಕೀಲರಾದ ಆನಂದ್ ಮಡಿವಾಳ ತಿಳಿಸಿದ್ದಾರೆ.</p>.<p><strong>ಸಂಧಾನದಲ್ಲಿ ಒಂದಾದ ಹಿರಿಯ ದಂಪತಿ:</strong></p>.<p>ಜೀವನದಲ್ಲಿ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ 64 ವರ್ಷದ ಪತಿ ಹಾಗೂ 52 ವರ್ಷದ ಪತ್ನಿ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಹಾಗೂ ವಕೀಲರ ಮಧ್ಯೆಸ್ಥಿಕೆಯಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗಲು ನಿರ್ಧರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ 91 ಲಕ್ಷ ನೀಡಲು ಯುನಿವರ್ಸಲ್ ಸೊಂಒ ಜನರಲ್ ಇನ್ಶುರೆನ್ಸ್ ವಿಮಾ ಸಂಸ್ಥೆಯು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮಾಡಿಕೊಂಡಿದೆ.</p>.<p>ಉಡುಪಿ ನಗರಸಭೆಯ ಉದ್ಯೋಗಿಯೊಬ್ಬರು 2021 ಜ.16ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಕಡೆಯವರು ಉಡುಪಿಯ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅಪಘಾತ ಮಾಡಿದ ಕಾರಿನ ವಿಮೆಯು ಯುನಿವರ್ಸಲ್ ಸೊಂಪೊ ಇನ್ಸೂರೆನ್ಸ್ ಸಂಸ್ಥೆಗೆ ಒಳಪಟ್ಟಿತ್ತು.</p>.<p>ಈ ಸಂಬಂಧ ಪ್ರಕರಣದಲ್ಲಿ ವಕೀಲರ ಅಭಿಪ್ರಾಯ ಪಡೆದ ವಿಮಾ ಕಂಪೆನಿಯು ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ನಿರ್ಧರಿಸಿತು. ಅದರಂತೆ ಅರ್ಜಿದಾರರು ಹಾಗೂ ವಿಮಾ ಕಂಪನಿಯು ರಾಜಿ ಸಂಧಾನ ಪತ್ರಕ್ಕೆ ಸಹಿ ಹಾಕಿದ್ದು 91 ಲಕ್ಷ ಪರಿಹಾರ ನೀಡಲು ಒಪ್ಪಿಕೊಳ್ಳಲಾಗಿದೆ.</p>.<p>ಜಿಲ್ಲಾ ಮಟ್ಟದ ಲೋಕ್ ಅದಾಲತ್ನಲ್ಲಿ ಖಾಸಗಿ ವಿಮಾ ಸಂಸ್ಥೆ ದೊಡ್ಡಮೊತ್ತದ ಪರಿಹಾರ ನೀಡಲು ಒಪ್ಪಿರುವುದು ಇದೇ ಮೊದಲ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯ ವಕೀಲರಾದ ಆನಂದ್ ಮಡಿವಾಳ ತಿಳಿಸಿದ್ದಾರೆ.</p>.<p><strong>ಸಂಧಾನದಲ್ಲಿ ಒಂದಾದ ಹಿರಿಯ ದಂಪತಿ:</strong></p>.<p>ಜೀವನದಲ್ಲಿ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ 64 ವರ್ಷದ ಪತಿ ಹಾಗೂ 52 ವರ್ಷದ ಪತ್ನಿ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಹಾಗೂ ವಕೀಲರ ಮಧ್ಯೆಸ್ಥಿಕೆಯಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗಲು ನಿರ್ಧರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>