<p><strong>ಉಡುಪಿ: </strong>ಕುಂಜಾರುಗಿರಿ ಬೆಟ್ಟದ ತಪ್ಪಲಿನಲ್ಲಿರುವ 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಮೂರ್ತಿಗೆ ಮಧ್ವನವಮಿಯ ಪ್ರಯುಕ್ತ ಸೋಮವಾರ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.</p>.<p>ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು, ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರತೀರ್ಥರು ಮಧ್ವಾಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪಂಚ ಕಲಶಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆ ನೆರವೇರಿತು. ಮಠದ ವಿದ್ವಾಂಸರಾದ ರಾಜಗೋಪಾಲಚಾರ್ಯರು ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.</p>.<p>ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥರು ಹಿಂದೆ, ಮಧ್ವಾಚಾರ್ಯರ ಏಕಶಿಲಾ ಪ್ರತಿಮೆಯನ್ನು ಕುಂಜಾರುಗಿರಿಯಲ್ಲಿ ಪ್ರತಿಷ್ಠಾಪಿಸಿದ್ದರು. ಈ ಪ್ರತಿಮೆ ನಿರ್ಮಾಣವಾದ ಬಳಿಕ ಕುಂಜಾರುಗಿರಿಗೆ ಭೇಟಿನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.</p>.<p><strong>ಕೃಷ್ಣಮಠದಲ್ಲಿ ಪೂಜೆ</strong></p>.<p>ಮಧ್ವನವಮಿಯ ಪ್ರಯುಕ್ತಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಆಚಾರ್ಯ ಮಧ್ವರು ಅದೃಶ್ಯರಾಗಿದ್ದಾರೆ ಎನ್ನಲಾದ ಸ್ಥಳದಲ್ಲಿ ಪರ್ಯಾಯ ಅದಮಾರು ಈಶಪ್ರಿಯ ತೀರ್ಥರು ಸೋಮವಾರ ವಿಶೇಷ ಪೂಜೆಯನ್ನು ನೆರವೇರಿಸಿದರು.</p>.<p>ಇದೇವೇಳೆಕೃಷ್ಣ ಮಠದ ರಥಬೀದಿಯಲ್ಲಿ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಪಲಿಮಾರು ಮಠದ ಹೃಷಿಕೇಶತೀರ್ಥರು ರಚಿಸಿದ ಸರ್ವಮೂಲ ಗ್ರಂಥದ ಮೂಲ ಹಸ್ತಪ್ರತಿಗಳನ್ನು ಸುವರ್ಣ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.</p>.<p><strong>ಮಧ್ವ ನವಮಿಯ ವಿಶೇಷ</strong></p>.<p>ಮಕರ ಮಾಸದ ಶುದ್ಧ ನವಮಿಯಂದು ಮಧ್ವಾಚಾರ್ಯರು ಉಡುಪಿಯ ಅನಂತೇಶ್ವರ ದೇವಾಲಯದ ಮುಂಭಾಗ ಐತರೇಯೋಪನಿಷತ್ತಿನ ಪ್ರವಚನ ನಡೆಸುತ್ತ ಸಶರೀರವಾಗಿ ಅದೃಶ್ಯರಾದರು ಎನ್ನಲಾಗುತ್ತದೆ. ಈ ದಿನದಂದು ಅಷ್ಟಮಠಗಳ ಯತಿಗಳು ವಾದ್ಯಘೋಷ, ಮಂತ್ರಘೋಷಗಳೊಂದಿಗೆ ಅನಂತೇಶ್ವರನ ದೇಗುಲಕ್ಕೆ ಬಂದುಅಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯ.</p>.<p>ವಿಶೇಷ ಪೂಜೆ ಬಳಿಕ ರಥೋತ್ಸವ ನಡೆಯುತ್ತದೆ. ಜತೆಗೆ, ಮಧ್ವಾಚಾರ್ಯರ ಅವತಾರ ಸ್ಥಳವಾದ ಪಾಜಕದಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ. ದ್ವೈತ ಮತ ಸಂಸ್ಥಾಪಕರಾದ ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕಡೆಗೋಲು ಕೃಷ್ಣನ ವಿಗ್ರವನ್ನು ಪ್ರತಿಷ್ಠಾಪಿಸಿ, 8 ಬಾಲ ಯತಿಗಳನ್ನು ಸರತಿ ಸಾಲಿನಲ್ಲಿ ಕೃಷ್ಣನ ಪೂಜಾ ಕೈಂಕರ್ಯಕ್ಕೆ ನೇಮಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಕುಂಜಾರುಗಿರಿ ಬೆಟ್ಟದ ತಪ್ಪಲಿನಲ್ಲಿರುವ 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಮೂರ್ತಿಗೆ ಮಧ್ವನವಮಿಯ ಪ್ರಯುಕ್ತ ಸೋಮವಾರ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.</p>.<p>ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು, ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರತೀರ್ಥರು ಮಧ್ವಾಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪಂಚ ಕಲಶಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆ ನೆರವೇರಿತು. ಮಠದ ವಿದ್ವಾಂಸರಾದ ರಾಜಗೋಪಾಲಚಾರ್ಯರು ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.</p>.<p>ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥರು ಹಿಂದೆ, ಮಧ್ವಾಚಾರ್ಯರ ಏಕಶಿಲಾ ಪ್ರತಿಮೆಯನ್ನು ಕುಂಜಾರುಗಿರಿಯಲ್ಲಿ ಪ್ರತಿಷ್ಠಾಪಿಸಿದ್ದರು. ಈ ಪ್ರತಿಮೆ ನಿರ್ಮಾಣವಾದ ಬಳಿಕ ಕುಂಜಾರುಗಿರಿಗೆ ಭೇಟಿನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.</p>.<p><strong>ಕೃಷ್ಣಮಠದಲ್ಲಿ ಪೂಜೆ</strong></p>.<p>ಮಧ್ವನವಮಿಯ ಪ್ರಯುಕ್ತಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಆಚಾರ್ಯ ಮಧ್ವರು ಅದೃಶ್ಯರಾಗಿದ್ದಾರೆ ಎನ್ನಲಾದ ಸ್ಥಳದಲ್ಲಿ ಪರ್ಯಾಯ ಅದಮಾರು ಈಶಪ್ರಿಯ ತೀರ್ಥರು ಸೋಮವಾರ ವಿಶೇಷ ಪೂಜೆಯನ್ನು ನೆರವೇರಿಸಿದರು.</p>.<p>ಇದೇವೇಳೆಕೃಷ್ಣ ಮಠದ ರಥಬೀದಿಯಲ್ಲಿ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಪಲಿಮಾರು ಮಠದ ಹೃಷಿಕೇಶತೀರ್ಥರು ರಚಿಸಿದ ಸರ್ವಮೂಲ ಗ್ರಂಥದ ಮೂಲ ಹಸ್ತಪ್ರತಿಗಳನ್ನು ಸುವರ್ಣ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.</p>.<p><strong>ಮಧ್ವ ನವಮಿಯ ವಿಶೇಷ</strong></p>.<p>ಮಕರ ಮಾಸದ ಶುದ್ಧ ನವಮಿಯಂದು ಮಧ್ವಾಚಾರ್ಯರು ಉಡುಪಿಯ ಅನಂತೇಶ್ವರ ದೇವಾಲಯದ ಮುಂಭಾಗ ಐತರೇಯೋಪನಿಷತ್ತಿನ ಪ್ರವಚನ ನಡೆಸುತ್ತ ಸಶರೀರವಾಗಿ ಅದೃಶ್ಯರಾದರು ಎನ್ನಲಾಗುತ್ತದೆ. ಈ ದಿನದಂದು ಅಷ್ಟಮಠಗಳ ಯತಿಗಳು ವಾದ್ಯಘೋಷ, ಮಂತ್ರಘೋಷಗಳೊಂದಿಗೆ ಅನಂತೇಶ್ವರನ ದೇಗುಲಕ್ಕೆ ಬಂದುಅಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯ.</p>.<p>ವಿಶೇಷ ಪೂಜೆ ಬಳಿಕ ರಥೋತ್ಸವ ನಡೆಯುತ್ತದೆ. ಜತೆಗೆ, ಮಧ್ವಾಚಾರ್ಯರ ಅವತಾರ ಸ್ಥಳವಾದ ಪಾಜಕದಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ. ದ್ವೈತ ಮತ ಸಂಸ್ಥಾಪಕರಾದ ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕಡೆಗೋಲು ಕೃಷ್ಣನ ವಿಗ್ರವನ್ನು ಪ್ರತಿಷ್ಠಾಪಿಸಿ, 8 ಬಾಲ ಯತಿಗಳನ್ನು ಸರತಿ ಸಾಲಿನಲ್ಲಿ ಕೃಷ್ಣನ ಪೂಜಾ ಕೈಂಕರ್ಯಕ್ಕೆ ನೇಮಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>