ಮಂದಾರ್ತಿ ದೇವಳದ ದುರ್ಗಾಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ಸತತ ಆರನೇ ವರ್ಷ ಮಳೆಗಾಲದಲ್ಲಿ ಆಯೋಜಿಸಿದ್ದ ಸೇವೆ ಆಟವು ಜೂನ್ 23ರಿಂದ ಆರಂಭಗೊಂಡು ಯಶಸ್ವಿಯಾಗಿ ನಡೆಯಿತು. ಕರಾವಳಿಯ ಮತ್ತು ಮಲೆನಾಡಿನ ಭಕ್ತರ ಸೇವಾರ್ಥವಾಗಿ ಎರಡು ಮೇಳಗಳೊಂದಿಗೆ ಕಲಾವಿದರ ಸಹಕಾರ, ಸೇವಾರ್ಥಿಗಳ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹದಿಂದ ನಿರಂತರವಾಗಿ ನಡೆದಿದೆ.