ಹಿಂದೆ ಯಾವುದೋ ಒಂದು ಕಾರಣಕ್ಕೆ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಬ್ರಾಹ್ಮಣ ಸಮಾಜವನ್ನು ದೂಷಿಸುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಕ್ತಿತ್ವವನ್ನು ತೋರಿಸುತ್ತದೆ. ಪ್ರಹ್ಲಾದ್ ಜೋಷಿ ಚಿತ್ಪಾವನ, ಪೇಶ್ವೆ ಬ್ರಾಹ್ಮಣರಲ್ಲ; ಮಾಧ್ವ ಸಮುದಾಯದವರಾಗಿದ್ದು ಉತ್ತರಾಧಿ ಮಠಕ್ಕೆ ನಡೆದುಕೊಳ್ಳುತ್ತಾರೆ ಎಂದು ರಾಜ್ಯ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯದ ಡಿಎನ್ಎ ಸರಿಯಿಲ್ಲ ಎಂದು ನಿಂಧಿಸುವುದು ಅವಿವೇಕತನದ ಹೇಳಿಕೆ ಎಂದರು.