ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ: ಶಾಸಕ ರಘುಪತಿ ಭಟ್‌

Last Updated 10 ಡಿಸೆಂಬರ್ 2021, 16:05 IST
ಅಕ್ಷರ ಗಾತ್ರ

ಉಡುಪಿ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ. ಆದರೆ, ಮೊಟ್ಟೆಯನ್ನು ಕೊಡುವಾಗ ಪ್ರತ್ಯೇಕ ಕೋಣೆ ಅಥವಾ ಟೇಬಲ್‌ನಲ್ಲಿ ಕೊಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಸ್ಯಹಾರ ಪಾಲಿಸಿಕೊಂಡು ಬಂದವರಿಗೆ ಮಾಂಸಾಹಾರ ನೋಡಿದಾಗ ಮನಸ್ಸಿನಲ್ಲಿ ಕಿರಿಕಿರಿ ಆಗಬಹುದು. ಹಾಗಾಗಿ, ಶಾಲೆಗಳಲ್ಲಿ ಪ್ರತ್ಯೇಕವಾಗಿ ಮೊಟ್ಟೆ ಕೊಟ್ಟರೆ ಉಳಿತು ಎಂದರು.

ಎಲ್ಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನಲೇಬೇಕು ಎಂಬ ನಿಯಮವಿಲ್ಲ. ಅವರವರ ಆಹಾರ ಕ್ರಮಗಳನ್ನು ಪಾಲಿಸಬಹುದು ಎಂದು ಶಾಸಕರ ರಘುಪತಿ ಭಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT