ಉಡುಪಿ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ. ಆದರೆ, ಮೊಟ್ಟೆಯನ್ನು ಕೊಡುವಾಗ ಪ್ರತ್ಯೇಕ ಕೋಣೆ ಅಥವಾ ಟೇಬಲ್ನಲ್ಲಿ ಕೊಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಸ್ಯಹಾರ ಪಾಲಿಸಿಕೊಂಡು ಬಂದವರಿಗೆ ಮಾಂಸಾಹಾರ ನೋಡಿದಾಗ ಮನಸ್ಸಿನಲ್ಲಿ ಕಿರಿಕಿರಿ ಆಗಬಹುದು. ಹಾಗಾಗಿ, ಶಾಲೆಗಳಲ್ಲಿ ಪ್ರತ್ಯೇಕವಾಗಿ ಮೊಟ್ಟೆ ಕೊಟ್ಟರೆ ಉಳಿತು ಎಂದರು.
ಎಲ್ಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನಲೇಬೇಕು ಎಂಬ ನಿಯಮವಿಲ್ಲ. ಅವರವರ ಆಹಾರ ಕ್ರಮಗಳನ್ನು ಪಾಲಿಸಬಹುದು ಎಂದು ಶಾಸಕರ ರಘುಪತಿ ಭಟ್ ಹೇಳಿದರು.