‘ಮೈತ್ರಿ ಸರ್ಕಾರವನ್ನು ಲೂಟಿ ಸರ್ಕಾರ, ವರ್ಗಾವಣೆ ದಂಧೆಯ ಸರ್ಕಾರವೆಂದು ಆರೋಪ ಮಾಡುತ್ತಿದ್ದ ಯಡಿಯೂರಪ್ಪ, ಈಗ ಜೈಲಿಗೆ ಹೋಗಿಬಂದಿದ್ದ ತಹಶೀಲ್ದಾರ್ನನ್ನು ಯಲಹಂಕಕ್ಕೆ ನೇಮಕ ಮಾಡಲು ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ. ನಾನು ಅಧಿಕಾರದಲ್ಲಿದ್ದಾಗ ಆತ ಬೇರೆ ಬೇರೆ ಮೂಲದಿಂದ ಸಾಕಷ್ಟು ಆಫರ್ ತಂದಿದ್ದ. ಆಗ ನಾನು ಅದನ್ನು ತಡೆಹಿಡಿದಿದ್ದೆ’ ಎಂದು ತಿಳಿಸಿದರು.