<p><strong>ಉಡುಪಿ: </strong>ಮಂಗಳೂರಿನ ಎಂಆರ್ಪಿಎಲ್ ಕಂಪನಿಯ ನಿರ್ವಹಣೆಗೆ ಸಂಬಂಧಪಟ್ಟ ಸಣ್ಣ ಬೋಟ್ ಶನಿವಾರ ಅಲೆಗಳ ಹೊಡೆತಕ್ಕೆ ಸಿಕ್ಕು ಮಗುಚಿದೆ. ಅವಘಡದಲ್ಲಿ ಓರ್ವ ಮೃತಪಟ್ಟಿದ್ದು ಕಾಪು ಬಳಿಯ ಸಮುದ್ರದಲ್ಲಿ ಶವ ಪತ್ತೆಯಾಗಿದೆ.</p>.<p>ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ತೇಲುತ್ತಿದ್ದ ಇಬ್ಬರನ್ನು ಮಟ್ಟು ಶಿರ್ವದ ಮಟ್ಟು ಸಮೀಪ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.</p>.<p>ಕೊಲ್ಕತ್ತ ಮೂಲದ ಮುನಿರುಲ್ ಮುಲ್ಲಾ ಮತ್ತು ಕರಿಮುಲ್ ಶೇಖ್ ಬದುಕುಳಿದವರು. ಬೋಟ್ನಲ್ಲಿ 8 ಮಂದಿ ಇದ್ದರು. ಐವರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆಯ ಎಸ್ಪಿ ಚೇತನ್ ಮಾಹಿತಿ ನೀಡಿದರು.</p>.<p>ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ದಡಕ್ಕೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ.</p>.<p>ಇದನ್ನೂ ನೋಡಿ: <a href="http://t"><strong>ಉಡುಪಿಯಲ್ಲಿ ‘ತೌಕ್ತೆ’ ಅಬ್ಬರಕ್ಕೆ ನೂರಾರು ಮರಗಳು ನೀರುಪಾಲು, ಲೈಟ್ ಹೌಸ್ ಬಂಡೆಗೆ ಬಡಿಯುತ್ತಿರುವ ಅಲೆಗಳು</strong></a><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಮಂಗಳೂರಿನ ಎಂಆರ್ಪಿಎಲ್ ಕಂಪನಿಯ ನಿರ್ವಹಣೆಗೆ ಸಂಬಂಧಪಟ್ಟ ಸಣ್ಣ ಬೋಟ್ ಶನಿವಾರ ಅಲೆಗಳ ಹೊಡೆತಕ್ಕೆ ಸಿಕ್ಕು ಮಗುಚಿದೆ. ಅವಘಡದಲ್ಲಿ ಓರ್ವ ಮೃತಪಟ್ಟಿದ್ದು ಕಾಪು ಬಳಿಯ ಸಮುದ್ರದಲ್ಲಿ ಶವ ಪತ್ತೆಯಾಗಿದೆ.</p>.<p>ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ತೇಲುತ್ತಿದ್ದ ಇಬ್ಬರನ್ನು ಮಟ್ಟು ಶಿರ್ವದ ಮಟ್ಟು ಸಮೀಪ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.</p>.<p>ಕೊಲ್ಕತ್ತ ಮೂಲದ ಮುನಿರುಲ್ ಮುಲ್ಲಾ ಮತ್ತು ಕರಿಮುಲ್ ಶೇಖ್ ಬದುಕುಳಿದವರು. ಬೋಟ್ನಲ್ಲಿ 8 ಮಂದಿ ಇದ್ದರು. ಐವರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆಯ ಎಸ್ಪಿ ಚೇತನ್ ಮಾಹಿತಿ ನೀಡಿದರು.</p>.<p>ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ದಡಕ್ಕೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ.</p>.<p>ಇದನ್ನೂ ನೋಡಿ: <a href="http://t"><strong>ಉಡುಪಿಯಲ್ಲಿ ‘ತೌಕ್ತೆ’ ಅಬ್ಬರಕ್ಕೆ ನೂರಾರು ಮರಗಳು ನೀರುಪಾಲು, ಲೈಟ್ ಹೌಸ್ ಬಂಡೆಗೆ ಬಡಿಯುತ್ತಿರುವ ಅಲೆಗಳು</strong></a><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>