ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬೋಟ್‌ ಪಲ್ಟಿ| ಓರ್ವ ಸಾವು- ಇಬ್ಬರ ರಕ್ಷಣೆ, ಐವರು ನಾಪತ್ತೆ

Last Updated 15 ಮೇ 2021, 16:53 IST
ಅಕ್ಷರ ಗಾತ್ರ

ಉಡುಪಿ: ಮಂಗಳೂರಿನ ಎಂಆರ್‌ಪಿಎಲ್‌ ಕಂಪನಿಯ ನಿರ್ವಹಣೆಗೆ ಸಂಬಂಧಪಟ್ಟ ಸಣ್ಣ ಬೋಟ್‌ ಶನಿವಾರ ಅಲೆಗಳ ಹೊಡೆತಕ್ಕೆ ಸಿಕ್ಕು ಮಗುಚಿದೆ. ಅವಘಡದಲ್ಲಿ ಓರ್ವ ಮೃತ‍ಪಟ್ಟಿದ್ದು ಕಾಪು ಬಳಿಯ ಸಮುದ್ರದಲ್ಲಿ ಶವ ಪತ್ತೆಯಾಗಿದೆ.

ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ತೇಲುತ್ತಿದ್ದ ಇಬ್ಬರನ್ನು ಮಟ್ಟು ಶಿರ್ವದ ಮಟ್ಟು ಸಮೀಪ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಲ್ಕತ್ತ ಮೂಲದ ಮುನಿರುಲ್ ಮುಲ್ಲಾ ಮತ್ತು ಕರಿಮುಲ್ ಶೇಖ್ ಬದುಕುಳಿದವರು. ಬೋಟ್‌ನಲ್ಲಿ 8 ಮಂದಿ ಇದ್ದರು. ಐವರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆಯ ಎಸ್‌ಪಿ ಚೇತನ್ ಮಾಹಿತಿ ನೀಡಿದರು.

ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ದಡಕ್ಕೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT