ಭೇಟಿ ವೇಳೆ, ಪೇಜಾವರ ಶ್ರೀಗಳ ಜತೆಗಿನ ಒಡನಾಟವನ್ನು ಹಂಚಿಕೊಂಡರು. ಮೂರು ವರ್ಷಗಳ ಹಿಂದೆ ಬೆಂಗಳೂರಿನ ವಿದ್ಯಾಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಮರಿಸಿದರು. ಇದೇವೇಳೆ ಉಡುಪಿಯ ಕೃಷ್ಣಮಠ, ನೀಲಾವರದ ಗೋಶಾಲೆ ಹಾಗೂ ಬೆಂಗಳೂರಿನಲ್ಲಿ ಹಿರಿಯ ಗುರುಗಳ ವೃಂದಾವನ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಯಿತು ಎಂದು ಪೇಜಾವರ ಶ್ರೀಗಳು ತಿಳಿಸಿದರು.