ಉಡುಪಿ: ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ(ಪಿಎಂಎಸ್ಬಿವೈ)ಯಡಿ ನೋಂದಾಯಿಸಿಕೊಂಡಿರುವವರು ವಿಮಾ ಪಾಲಿಸಿಗಳ ನವೀಕರಣಕ್ಕೆ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್ ಖಾತೆಯಲ್ಲಿ ಉಳಿಸಿರಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.
ಪಿಎಂಜೆಜೆಬಿವೈ ಹಾಗೂ ಪಿಎಂಎಸ್ಬಿವೈ ಪಾಲಿಸಿಗಳ 2022–23ನೇ ಸಾಲಿನ ನವೀಕರಣಕ್ಕೆ ಮೇ 31 ಅಂತಿಮದಿನವಾಗಿದ್ದು, ಈ ದಿನಾಂಕದೊಳಗೆ ಖಾತೆಯಲ್ಲಿ ಅಗತ್ಯವಿರುವಷ್ಟು ಹಣ ಇರುವಂತೆ ಖಾತೆದಾರರು ಎಚ್ಚರವಹಿಸಬೇಕು. ಖಾತೆಯಲ್ಲಿ ಹಣ ಇಲ್ಲದಿದ್ದರೆ ಪಾಲಿಸಿ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಿಎಂಜೆಜೆಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 330 ಹಾಗೂ ಪಿಎಂಎಸ್ಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 12 ಇರಬೇಕು. ಮೇ 25ರಿಂದ 30ರವರೆಗೂ ಪಾಲಿಸಿದಾರರ ಖಾತೆಯಿಂದ ಹಣ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ.